Advertisement

ಶಿಥಿಲಗೊಂಡ ನೀರಿನ ಟ್ಯಾಂಕ್‌ ತೆರವಿಗೆ ಆಗ್ರಹ

01:34 PM Dec 19, 2021 | Team Udayavani |

ಯಾದಗಿರಿ: ಜೀನಕೇರಾ ಗ್ರಾಮದಲ್ಲಿನ ಶಿಥಿಲಗೊಂಡ ನೀರಿನ ಟ್ಯಾಂಕ್‌ ತೆರವುಗೊಳಿಸುವಂತೆ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಮುದ್ನಾಳ ಆಗ್ರಹಿಸಿದರು.

Advertisement

ಜೀನಕೇರಾ ಗ್ರಾಮದ ರಸ್ತೆಯ ಎಡಭಾಗದಲ್ಲಿರುವ ಗ್ರಾಮದ ಹಳೆಯ ತೊಟ್ಟಿ ಇರುವ ಸ್ಥಳಕ್ಕೆ ಭೇಟಿ ನೀಡಿದ ಅವರು, ಪಾಚಿಗಟ್ಟಿದ ಶಿಥಿಲಗೊಂಡ ನೀರಿನ ಮೇಲ್ತೊಟ್ಟಿ ಯಾವಾಗಲಾದರೂ ಬೀಳುವ ಸಾಧ್ಯತೆ ಇದ್ದು, ಇದರಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಏನಾದರೂ ಹೆಚ್ಚು ಕಮ್ಮಿ ಆದರೆ ಜಿಲ್ಲಾಡಳಿತವೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ವೆಂಕಟೇಶ ಮಾನೆಗಾರ, ಹಣಮಂತ ಬಾವೂರವು, ಶರಣಪ್ಪ ಕೋರಬೂರ, ಅಂಬು ಕುಂಬಾರ, ಮಲ್ಲಪ್ಪ, ಕಾಶಪ್ಪ, ಸಾಬಣ್ಣ, ಹಣಮಂತ ಸೇರಿಂದತೆ ಅಂಬಿಗರ ಚೌಡಯ್ಯ, ವಿಠಲ್‌ ಹೇರೂರು ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next