Advertisement

ಕುರಿಗಾಹಿ ಹತ್ಯಾಚಾರ: ಆರೋಪಿತನ ಬಂಧನಕ್ಕೆ ಆಗ್ರಹ

11:54 AM Feb 25, 2022 | Team Udayavani |

ಸುರಪುರ: ಕುರಿಗಾಹಿ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಆರೋಪಿಗಳನ್ನು ಬಂಧಿಸಿ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು. ನೊಂದ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘ ತಾಲೂಕು ಘಟಕದ ಕಾರ್ಯಕರ್ತರು ಗುರುವಾರ ತಹಶೀಲ್ದಾರ್‌ ಕಚೇರಿ ಮುಂದೆ ಪ್ರತಿಭಟಿಸಿದರು.

Advertisement

ಸಂಘದ ತಾಲೂಕು ಅಧ್ಯಕ್ಷ ಕಾಳಪ್ಪ ಕವಾತಿ ಮಾತನಾಡಿ, ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದ್ದು, ಈ ಕೃತ್ಯಯಲ್ಲಿ ಇನ್ನು ಹಲವರು ಭಾಗಿಯಾಗಿದ್ದಾರೆ ಎಂದು ಲಕ್ಷ್ಮೀ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

ಸೂಕ್ತ ತನಿಖೆ ನಡೆಸಬೇಕು. ಲಕ್ಷ್ಮೀಗೆ ಮೂವರು ಚಿಕ್ಕ ಮಕ್ಕಳಿದ್ದು, ಕುಟುಂಬವು ಕುರಿ ಸಾಕಾಣಿಕೆ ಮೇಲೆ ಅವಲಂಬಿತವಾಗಿದೆ. ಆಕೆಯ ಕುಟುಂಬಕ್ಕೆ ಸರಕಾರದಿಂದ ಕನಿಷ್ಟ 10 ಲಕ್ಷ ರೂ. ಪರಿಹಾರ ಧನ ಘೋಷಿಸಬೇಕು. ರಾಜ್ಯದ ಎಲ್ಲ ವಲಸೆ ಕುರಿಗಾರರಿಗೆ ಸೂಕ್ತ ಭದ್ರತೆ ನೀಡಬೇಕೆಂದು ಒತ್ತಾಯಿಸಿದರು.

ನಂತರ ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಗಂಗಾಮತ ಸಮಾಜದ ತಾಲೂಕು ಅಧ್ಯಕ್ಷ ಭಂಡಾರೆಪ್ಪ ನಾಟೇಕಾರ, ಕುರುಬ ಸಮಾಜದ ಮುಖಂಡರಾದ ಮಲ್ಲು ದಂಡಿನ್‌, ಭೀಮರಾಯ ಮೂಲಿಮನಿ, ಬೀರಲಿಂಗ ಮಗ್ಗದ, ಕೃಷ್ಣಾ ಬಾದ್ಯಾಪುರ, ಸಿದ್ರಾಮ ಎಲಿಗಾರ, ಬೀರಪ್ಪ ಪೂಜಾರಿ, ಹನುಮಂತ್ರಾಯ ಕಡ್ಡಿ, ಭೀಮಣ್ಣ ಕುರಿ, ಮಂಜುನಾಥ ತಿಂಥಣಿ, ವೆಂಕಿ ಕೊಳ್ಳಿ, ವಾಸು ಕವಾತಿ, ಚೆನ್ನಬಸವ ವಾಗಣಗೇರಾ, ಮಹಾರಾಜ ಬಬಲಾದಿ, ಬಲಭೀಮ ಬೈರಿಮಡ್ಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next