Advertisement

ದಿಲ್ಲಿ: 25ರ ಮದುಮಗನ ಮೇಲೆ ಗುಂಡೆಸೆದ ಅಪರಿಚಿತ ದುಷ್ಕರ್ಮಿಗಳು

11:59 AM Nov 20, 2018 | Team Udayavani |

ಹೊಸದಿಲ್ಲಿ: ನಿನ್ನೆ ಸೋಮವಾರ ರಾತ್ರಿ ಮದುವೆ ದಿಬ್ಬಣ ಸಾಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು 25ರ ಹರೆಯದ ಮದುಮಗನ ಮೇಲೆ ಗುಂಡೆಸೆದು ಪರಾರಿಯಾದ ಘಟನೆ ನಡೆದಿದೆ.

Advertisement

ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮದುಮಗ ಬಾದಲ್‌ ದಿಬ್ಬಣದಲ್ಲಿ ಮದನ್‌ಗಿರ್‌ ಕಡೆಗಿನ ಮದುವೆ ಮಂಟಪಕ್ಕೆ  ಹೋಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಆತನ ಮೇಲೆ ಗುಂಡು ಹಾರಿಸಿದ್ದರು. 

ಮದುಮಗ ಬಾದಲ್‌ ಅವರ ಭುಜಕ್ಕೆ ಗುಂಡೇಟು ತಗಲಿದ್ದು ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಒಯ್ಯಲಾಯಿತು. ಅವರು ಪ್ರಾಣಾಪಾಯದಿಂದ ಪಾರಾಗಿರುವುದು ತಿಳಿದು ಬಂದಿದೆ. 

ಮದುಮಗ ಬಾದಲ್‌ ಮೇಲೆ ಗುಂಡಿನ ದಾಳಿ ನಡೆಯಲು ಕಾರಣವೇನೆಂದು ಈಗಿನ್ನು ಪೊಲೀಸ್‌ ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ. 

Advertisement

Udayavani is now on Telegram. Click here to join our channel and stay updated with the latest news.

Next