Advertisement

Train; ಕೆಟ್ಟು ನಿಂತ ‘ವಂದೇ ಭಾರತ್‌’ ಎಳೆದು ತಂದ ಗೂಡ್ಸ್‌ ರೈಲಿನ ಎಂಜಿನ್‌!

01:39 AM Sep 10, 2024 | Team Udayavani |

ಲಕ್ನೋ: ದಿಲ್ಲಿಯಿಂದ ವಾರಾಣಸಿಗೆ ತೆರಳುತ್ತಿದ್ದ ವಂದೇ ಭಾರತ್‌ ರೈಲೊಂದು ಉ.ಪ್ರ.ದ ಇಟಾವಾ ಜಿಲ್ಲೆಯಲ್ಲಿ ಕೆಟ್ಟು ನಿಂತ ಘಟನೆ ನಡೆದಿದೆ. ಈ ರೈಲನ್ನು ಸಮೀಪದ ಭರ್‌ಥಾನಾ ರೈಲ್ವೇ ನಿಲ್ದಾಣಕ್ಕೆ ಸರಕು ರೈಲ್ವೇ ಎಂಜಿನ್‌ ಬಳಸಿ ಎಳೆದು ತರಲಾಯಿತು. ಘಟನೆಯಿಂದ ಅಸಮಾಧಾನಿತರಾಗಿದ್ದ ಪ್ರಯಾ ಣಿಕರಿಗೆ ಬದಲೀ ರೈಲುಗಳ ಮುಖಾಂತರ ಕಾನ್ಪುರಕ್ಕೆ ಕಳುಹಿಸಿ ಅನಂತರ ಶ್ರಮ್‌ ಶಕ್ತಿ ಎಕ್ಸ್‌ಪ್ರೆಸ್‌ ರೈಲು ಮುಖಾಂತರ ವಾರಾಣಾಸಿಗೆ ತಲುಪಿಸಲಾಗುವುದು ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಹಲವಾರು ಮಂದಿ ಸಾಮಾಜಿಕ ತಾಣದಲ್ಲಿ ವ್ಯಂಗ್ಯ ಮಾಡಿದ್ದು, ಇದು ಬಿಜೆಪಿಯ ಡಬಲ್ ಇಂಜಿನ್ ಮಾಡೆಲ್ ಎಂದು ಟೀಕೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next