Advertisement

ದಿಲ್ಲಿ ಸಾಮೂಹಿಕ ಸಾವು; ಮರಣೋತ್ತರ ವರದಿ; ಆತ್ಮಹತ್ಯೆಯೇ ಕಾರಣ

07:11 PM Jul 02, 2018 | udayavani editorial |

ಹೊಸದಿಲ್ಲಿ : ದಿಲ್ಲಿಯ ಬುರಾರಿ ಪ್ರದೇಶದ ಮನೆಯೊಂದರಲ್ಲಿ ನೇಣು ಹಾಕಿಕೊಂಡ ಒಂದೇ ಕುಟುಂಬದ 11 ಸದಸ್ಯರ ಪೈಕಿ ಎಂಟು ಮಂದಿ ತಾವು ಸಾಯುವಾಗ ಯಾವುದೇ ರೀತಿಯ ಪ್ರತಿರೋಧ ತೋರಿದ ಕುರುಹುಗಳು ಕಂಡು ಬಂದಿಲ್ಲ; ಅಂತೆಯೇ ಅವರ ಸಾವು ನೇಣು ಬಿಗಿದು  ಮಾಡಿಕೊಂಡಿರುವ ಆತ್ಮಹತ್ಯೆಯದ್ದಾಗಿದೆ ಎಂದು ಆತ್ಮಹತ್ಯೆಗೆ ಶರಣಾದ ಎಲ್ಲರ ಮರಣೋತ್ತರ ಪರೀಕ್ಷೆಯ ಬಳಿಕ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ನೇಣಿಗೆ ಶರಣಾಗಿರುವವರ ಪೈಕಿ 8 ಮಂದಿಯ ಪ್ರಾಥಮಿಕ ಮರಣೋತ್ತರ ವರದಿ ಸಿದ್ಧವಾಗಿದ್ದು ಉಳಿದ ಮೂವರ ಅಟಾಪ್ಸಿ ವಿವರಗಳು ಇನ್ನಷ್ಟೇ ಸಿಗಬೇಕಾಗಿದೆ.

ಭಾಟಿಯಾ ಕುಟುಂಬದ 11 ಮಂದಿಯ ಶವ ಮನೆಯ ಕಬ್ಬಿಣದ ಮೆಶ್‌ಗೆ ನೇಣು ಬಿಗಿಯಲ್ಪಟ್ಟ ಸ್ಥಿತಿಯಲ್ಲಿ ನಿನ್ನೆ ಪತ್ತೆಯಾಗಿತ್ತು. ಮನೆಯ ಮುಖ್ಯಸ್ಥೆಯಾಗಿರುವ 77ರ ಹರೆಯದ ನಾರಾಯಣೀ ದೇವಿ ಅವರ ಶವವು ಮನೆಯ ಇನ್ನೊಂದು ಕೋಣೆಯ ನೆಲದಲ್ಲಿ ಬಿದ್ದಿರುವುದು ಪತ್ತೆಯಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next