Advertisement

Delhi: ಹಿಂದೂ ಸೇನೆಯಿಂದ ಬಾಬರ್‌ ರಸ್ತೆ ಫ‌ಲಕ ವಿರೂಪ 

12:17 AM Jan 21, 2024 | Team Udayavani |

ಹೊಸದಿಲ್ಲಿ : ಕೇಂದ್ರ ದಿಲ್ಲಿಯಲ್ಲಿರುವ ಬಾಬರ್‌ ರಸ್ತೆಯ ಹೆಸರನ್ನು ಬದಲಿಸಿ ಮರು ನಾಮಕರಣ ಮಾಡುವಂತೆ ಹಿಂದೂ ಸೇನೆಯ ಕಾರ್ಯಕರ್ತರು ಒತ್ತಾಯಿಸಿದ್ದು, ಶನಿವಾರ ರಸ್ತೆಯ ಸೂಚನಾ ಫ‌ಲಕವನ್ನು ವಿರೂಪಗೊಳಿಸಿದ್ದಾರೆ. ಬಾಬರ್‌ ರಸ್ತೆ ಎಂದಿದ್ದ ಸೂಚನಾಫ‌ಲಕಕ್ಕೆ ಮಸಿ ಬಳಿದು, ಅದರ ಮೇಲೆ “ಅಯೋಧ್ಯಾ ಮಾರ್ಗ’ ಎಂದು ಬರೆದಿರುವ ಪೋಸ್ಟರ್‌ ಅನ್ನು ಅಂಟಿಸಿದ್ದಾರೆ ಎನ್ನಲಾಗಿದೆ.

Advertisement

ಹೊಸದಿಲ್ಲಿಯ ಮುನ್ಸಿಪಲ್‌ ಕೌನ್ಸಿಲ್‌ ಅಧಿಕಾರಿಗಳು ದೂರು ದಾಖಲಿಸಿ ಪೋಸ್ಟರ್‌ ಅನ್ನು ತೆರವುಗೊಳಿಸಿದ್ದಾರೆ. ಇತ್ತ ಬಾಬರ್‌ ರಸ್ತೆಯ ಹೆಸರು ಬದಲಿಸಿ, ಆ ರಸ್ತೆಗೆ ಅಯೋಧ್ಯಾ ಮಾರ್ಗವೆಂದೇ ಮರು ನಾಮಕರಣ ಮಾಡಬೇಕು ಎಂದು ಹಿಂದೂಸೇನೆ ಅಧ್ಯಕ್ಷ ವಿಷ್ಣುಗುಪ್ತ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next