Advertisement

ಏರಿಂಡಿಯಾ ಪೈಲಟ್‌ಗಳ ವಜಾ ಆದೇಶವನ್ನು ತಿರಸ್ಕರಿಸಿದ ದೆಹಲಿ ಉಚ್ಚ ನ್ಯಾಯಾಲಯ

09:04 PM Jun 01, 2021 | Team Udayavani |

ನವದೆಹಲಿ: ಕಳೆದವರ್ಷ ಆಗಸ್ಟ್‌ನಲ್ಲಿ ಭಾರತದ ಸರ್ಕಾರಿ ವಿಮಾನಯಾನ ಸಂಸ್ಥೆ ಏರ್‌ ಇಂಡಿಯಾ; ಕಾಯಂ ಮತ್ತು ಗುತ್ತಿಗೆ ಆಧಾರಿತ ಹಲವು ಪೈಲಟ್‌ಗಳನ್ನು ಕೆಲಸದಿಂದ ಕಿತ್ತೂಗೆದಿತ್ತು. ಈ ಕ್ರಮವನ್ನು ತಿರಸ್ಕರಿಸಿರುವ ದೆಹಲಿ ಉಚ್ಚ ನ್ಯಾಯಾಲಯ; ಕೆಲಸ ಕಳೆದುಕೊಂಡವರಿಗೆ ಮತ್ತೆ ಕೆಲಸ ನೀಡಬೇಕು ಎಂದು ಸೂಚಿಸಿದೆ. ಹಾಗೆಯೇ ಇಷ್ಟು ತಿಂಗಳ ವೇತನವನ್ನೂ ಪಾವತಿಸಬೇಕೆಂದು ಆದೇಶಿಸಿದೆ.

Advertisement

ಆದರೆ ಗುತ್ತಿಗೆ ಆಧಾರಿತ ಪೈಲಟ್‌ಗಳ ಅವಧಿ ವಿಸ್ತರಣೆ ಏರ್‌ಇಂಡಿಯಾ ವಿವೇಚನೆಗೆ ಬಿಟ್ಟಿದ್ದು ಎಂದು ಸ್ಪಷ್ಟಪಡಿಸಿದೆ. ಏರ್‌ ಇಂಡಿಯಾ ಕ್ರಮ ವಿರೋಧಿಸಿ ಕಳೆದ ವರ್ಷ ಆಗಸ್ಟ್‌ನಲ್ಲಿ 40ಕ್ಕೂ ಅಧಿಕ ಅರ್ಜಿಗಳನ್ನು ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿತ್ತು.

ಇದನ್ನೂ ಓದಿ : ಕೇಂದ್ರದ ವಿರುದ್ಧ ಮುಗಿಬಿದ್ದ ರಾಹುಲ್‌, ಚಿದಂಬರಂ

Advertisement

Udayavani is now on Telegram. Click here to join our channel and stay updated with the latest news.

Next