Advertisement

ದಿಲ್ಲಿ ಹೊಟೇಲ್‌ ಅಗ್ನಿ ದುರಂತ: ಮ್ಯಾಜಿಸ್ಟ್ರೇಟ್‌ ತನಿಖೆಗೆ ಆದೇಶ

06:11 AM Feb 12, 2019 | Team Udayavani |

ಹೊಸದಿಲ್ಲಿ : ಮಧ್ಯ ದಿಲ್ಲಿಯ ಕರೋಲ್‌ ಬಾಗ್‌ ನಲ್ಲಿ ಇಂದು ಮಂಗಳವಾರ 17 ಜನರನ್ನು ಬಲಿ ಪಡೆದಿರುವ ಹೊಟೇಲ್‌ ಅಗ್ನಿ ದುರಂತದ ಬಗ್ಗೆ ದಿಲ್ಲಿ ಸರಕಾರ ಮ್ಯಾಜಿಸ್ಟ್ರೇಟರ ತನಿಖೆಗೆ ಆದೇಶಿಸಿರುವುದಾಗಿ ಗೃಹ ಸಚಿವ ಸತ್ಯೇಂದ್ರ ಜೈನ್‌ ತಿಳಿಸಿದ್ದಾರೆ.

Advertisement

ಅಗ್ನಿ ದುರಂತದ ಸುದ್ದಿ ತಿಳಿದೊಡನೆಯೇ ನಸುಕಿನ ವೇಳೆ ಅರ್ಪಿತ್‌ ಪ್ಯಾಲೇಸ್‌ ಹೊಟೇಲ್‌ಗೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿದ ಸಚಿವ ಜೈನ್‌ ಅವರು, ದಿಲ್ಲಿಯಲ್ಲಿನ ಐದು ಮತ್ತು ಐದಕ್ಕಿಂತ ಹೆಚ್ಚು ಮಹಡಿಗಳ ಕಟ್ಟಡಗಳಲ್ಲಿನ ಅಗ್ನಿ ಸುರಕ್ಷೆ ಮತ್ತು ಮುಂಜಾಗ್ರತೆ ವ್ಯವಸ್ಥೆಯ ಬಗ್ಗೆ ತಪಾಸಣೆ ನಡೆಸಿ ಒಂದು ವಾರದೊಳಗೆ ವರದಿ ನೀಡುವಂತೆ ತಾನು ಅಗ್ನಿ ಶಾಮಕ ದಳವನ್ನು ಕೇಳಿಕೊಂಡಿರುವುದಾಗಿ ತಿಳಿಸಿದರು. 

17 ಜನರನ್ನು ಬಲಿ ಪಡೆದಿರುವ ಅಗ್ನಿ ದುರಂತ ಸಂಭವಿಸಿರುವ ದಿಲ್ಲಿ ಹೊಟೇಲ್‌ನಲ್ಲಿ ಕೆಲವೊಂದು ಲೋಪಗಳು ಇದ್ದುದು ಪ್ರಾಥಮಿಕ ತನಿಖೆಯಲ್ಲೇ ಗೊತ್ತಾಗಿದೆ; ತಪ್ಪುಗಾರರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ಜೈನ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next