Advertisement

ಕ್ರಿಮಿನಲ್‌ ಮಾನಹಾನಿ ದಾವೆ: ಶಶಿ ತರೂರ್‌ಗೆ ದಿಲ್ಲಿ ಕೋರ್ಟಿನಿಂದ ಜಾಮೀನು

10:25 AM Jun 08, 2019 | Sathish malya |

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರನ್ನು ಕುಟುಕುವ ಚೇಳಿಗೆ ಹೋಲಿಸಿ ಮಾನಹಾನಿಕರ ಹೇಳಿಕೆ ನೀಡಿದ್ದ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ವಿರುದ್ಧ ದಾಖಲಾಗಿದ್ದ ದೂರಿಗೆ ಸಂಬಂಧಿಸಿ ದಿಲ್ಲಿ ನ್ಯಾಯಾಲಯ ತರೂರ್‌ಗೆ ಜಾಮೀನು ನೀಡಿದೆ.

Advertisement

ತರೂರ್‌ ಅವರು ಕೋರ್ಟಿಗೆ ಹಾಜರಾಗಿ ಸಲ್ಲಿಸಿದ್ದ ಜಾಮೀನು ಕೋರಿಕೆ ಅರ್ಜಿಯನ್ನು ಪರಿಗಣಿಸಿದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಸಮರ್‌ ವಿಶಾಲ್‌ ಅವರು 20,000 ರೂ. ವೈಯಕ್ತಿಕ ಬಾಂಡ್‌ ಆಧಾರದಲ್ಲಿ ತರೂರ್‌ಗೆ ಜಾಮೀನು ಮಂಜೂರು ಮಾಡಿದರು.

ಪ್ರಧಾನಿ ಮೋದಿ ಅವರನ್ನು ಕುಟುಕುವ ಚೇಳಿಗೆ ಹೋಲಿಸಿ ಹೇಳಿಕೆ ನೀಡಿದ್ದ ಶಶಿ ತರೂರ್‌ ವಿರುದ್ಧ ದಿಲ್ಲಿ ಬಿಜೆಪಿ ನಾಯಕ ರಾಜೀವ್‌ ಬಬ್ಬರ್‌ ಕ್ರಿಮಿನಲ್‌ ಮಾನಹಾನಿ ದಾವೆ ಹೂಡಿದ್ದರು. ಕಾಂಗ್ರೆಸ್‌ ನಾಯಕನ ಹೇಳಿಕೆಯಿಂದಾಗಿ ತನ್ನ ಧಾರ್ಮಿಕ ಭಾವನೆಗಳಿಗೆ ನೋವುಂಟಾಗಿದೆ ಎಂದು ಬಬ್ಬರ್‌ ದಾವೆಯಲ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next