Advertisement

ಕೇಜ್ರಿವಾಲ್ ಅಧಿಕೃತ ನಿವಾಸದ ನವೀಕರಣ; ಸಮರಕ್ಕಿಳಿದ BJP-AAP

10:18 PM Apr 27, 2023 | Team Udayavani |

ಹೊಸದಿಲ್ಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ನಿವಾಸದ ನವೀಕರಣದ ಕುರಿತು ಬಿಜೆಪಿ ಮತ್ತು ಎಎಪಿ ಜಟಾಪಟಿ ಮುಂದುವರೆಸಿದ್ದು, ಕೇಸರಿ ಪಕ್ಷದ ನಾಯಕರು “ರಾಜಭವನದ ಬಂಗಲೆ” ಗಾಗಿ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಆರೋಪಿಸಿ ಬಂಗಲೆಯ ಪ್ರತಿಕೃತಿಯೊಂದಿಗೆ ಪ್ರತಿಭಟನೆ ನಡೆಸಿದ್ದಾರೆ.

Advertisement

ಈ ವಿಚಾರವಾಗಿ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್, ಟ್ವಿಟರ್ ನಲ್ಲಿ ವಿಡಿಯೋ ಮೂಲಕ “ಬಿಜೆಪಿಗೆ ದೆಹಲಿ ಸಾರ್ವಜನಿಕರ ಉತ್ತರ ಎಂದು ಜನಾಭಿಪ್ರಾಯ ಹಂಚಿಕೊಂಡಿದ್ದಾರೆ.

”ತೆರಿಗೆ ಪಾವತಿದಾರರ ಹಣವನ್ನು ವ್ಯರ್ಥ ಮಾಡುತ್ತಿರುವ ದೇಶದ ಆಡಳಿತಗಾರರ ವಿರುದ್ಧ ಆಪ್ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಪಕ್ಷದ ನಾಯಕ ರಾಘವ್ ಚಡ್ಡಾ ಹೇಳಿದ್ದಾರೆ.

ದೆಹಲಿ ಮುಖ್ಯಮಂತ್ರಿ ನಿವಾಸದ ಬಳಿ ದೆಹಲಿ ಬಿಜೆಪಿ ನಡೆಸಿದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಿರೋಧ ಪಕ್ಷದ ನಾಯಕ ರಾಮ್‌ವೀರ್ ಸಿಂಗ್ ಬಿಧುರಿ, “ದೆಹಲಿಯನ್ನು ಲೂಟಿ ಮಾಡಿದ ಮಹಮ್ಮದ್ ಘಜ್ನವಿ ಮತ್ತು ಮುಹಮ್ಮದ್ ಘೋರಿಯ ಭವಿಷ್ಯವು ದೆಹಲಿಯ ಜನರ ಕೈಯಲ್ಲಿ ಕೇಜ್ರಿವಾಲ್‌ಗೆ ಒಂದು ದಿನ ಕಾಯುತ್ತಿದೆ” ಎಂದು ಹೇಳಿದರು. ಸಿವಿಲ್ ಲೈನ್ಸ್ ಏರಿಯಾದ 6, ಫ್ಲಾಗ್‌ಸ್ಟಾಫ್ ರಸ್ತೆಯಲ್ಲಿರುವ ಮುಖ್ಯಮಂತ್ರಿಯವರ ನಿವಾಸದ ನವೀಕರಣಕ್ಕಾಗಿ 45 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದು, ಆಪ್ ಮತ್ತು ಕೇಜ್ರಿವಾಲ್ ವಿರುದ್ಧ ಬಿಜೆಪಿ ಸಮರ ಸಾರಿದೆ.

ಬಿಜೆಪಿ ಪ್ರತಿಭಟನಾಕಾರರು ಚಂದಗಿ ರಾಮ್ ಅಖಾರಾದಿಂದ ಮೆರವಣಿಗೆಯನ್ನು ಪ್ರಾರಂಭಿಸಿದರು, ಅಲ್ಲಿ ಮುಖ್ಯಮಂತ್ರಿಯ ನವೀಕರಿಸಿದ ಬಂಗಲೆ ಪ್ರತಿಕೃತಿ ಸಂಕೇತವಾಗಿ ಇರಿಸಿ ಅದರ ಮುಂದೆ ಕೇಜ್ರಿವಾಲ್ ಅವರ ಮುಖವಾಡವನ್ನು ಧರಿಸಿ ಪಕ್ಷದ ಕಾರ್ಯಕರ್ತನನ್ನು ಕೂರಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next