Advertisement

ರಕ್ಷಣಾ ಸಚಿವೆಯಿಂದ ಹುತಾತ್ಮ ಯೋಧ ಔರಂಗಜೇಬ್‌ ಕುಟುಂಬ ಭೇಟಿ

04:01 PM Jun 20, 2018 | udayavani editorial |

ಶ್ರೀನಗರ : ಈಚೆಗೆ ಉಗ್ರರಿಂದ ಅಪಹೃತರಾಗಿ ಹತರಾಗಿದ್ದ ಭಾರತೀಯ ಯೋಧ ಔರಂಗಜೇಬ್‌ ಅವರ ಕುಟುಂಬದವರನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಜಮ್ಮು ಕಾಶ್ಮೀರದ ಪೂಂಚ್‌ನಲ್ಲಿ ಭೇಟಿಯಾಗಿ ಸಾಂತ್ವನ ಹೇಳಿದರು. 

Advertisement

ಸಚಿವ ನಿರ್ಮಲಾ ಅವರೊಂದಿಗೆ ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸ್‌ ಪಡೆಯ ಉನ್ನತ ಅಧಿಕಾರಿಗಳು ಇದ್ದರು.

ಹುತಾತ್ಮರಾಗಿರುವ ಯೋಧ ಔರಂಗಜೇಬ್‌ ಅವರ ಹಂತಕರನ್ನು ಹಿಡಿದು ಕಾನೂನು ಪ್ರಕಾರ ಶಿಕ್ಷಿಸಲಾಗುವುದು ಎಂಬ ಭರವಸೆಯನ್ನು ಸಚಿವೆ ನಿರ್ಮಲಾ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next