Advertisement
ಅಥಣಿ ಪಟ್ಟಣದ ಭೋಜರಾಜ ಕ್ರೀಡಾಂಗನದಲ್ಲಿ 2023 ರ ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಮಹೇಶ ಕುಮಠಳ್ಳಿ ಅವರ ಚುನಾವಣಾ ಪ್ರಚಾರಾರ್ಥಕವಾಗಿ ಬಿಜೆಪಿ ಕರ್ನಾಟಕ ಸಾರ್ವಜನಿಕ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ, ಸೋತವನನ್ನು ಉಪ ಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದೇವು, ಸವದಿಯವರೊಂದಿಗೆ ನಾನು ಖುದ್ದು ಮಾತನಾಡಿದ್ದೆ, ಕಾಂಗ್ರೆಸ್ ಪಕ್ಷ ಬಜರಂಗದಳವನ್ನು ಅವಮಾನಿಸಿದೆ. ಮುಸ್ಲಿಮರಿಗೆ 6% ಕುಡುವುದಾಗಿ ಹೇಳಿರುವ ಕಾಂಗ್ರೆಸ್ ಮುಖಂಡರು ಯಾರ ಮೀಸಲಾತಿ ಕಡಿಮೆ ಮಾಡುತ್ತಿರಿ ಲಿಂಗಾಯತ, ದಲಿತರ ಮೀಸಲಾತಿ ಕಡಿಮೇ ಮಾಡುತ್ತಿರೇನು? , ಮಹಾದಾಯಿ ನೀರನ್ನು ಮೋದಿಜಿಯವರು ಉತ್ತರ ಕರ್ನಾಟಕಕ್ಕೆ ನೀಡಿದರು, ಸಮಸ್ತ ಕಿತ್ತೂರು ಕರ್ನಾಟಕ ರೈತರಿಗೆ ಅನುಕುಲ ಮಾಡಿದ್ದಾರೆ, 10 ಸಾವಿರ ಕೋಟಿ ರೂ ಇನಕಂ ಟ್ಯಾಕ್ಸ್ ಮನ್ನಾ ಮಾಡಿದರು, ಮಹೇಶ ಕುಮಠಳ್ಳಿ ಹಾಗೂ ರಮೇಶ ಜಾರಕಿಹೊಳಿ ಅವರು ಬಿಜೆಪಿಗೆ ಬಂದಿದ್ದರಿಂದ ರಾಜ್ಯದಲ್ಲಿ ಬಿಜೆಪಿ ಸರಕಾರ ಬರುವಂತಾಯಿತು. ರಾಹುಲ್ ಗಾಂಧಿ ಹೋದಲೆಲ್ಲ ಅಲ್ಲಿಯ ಕಾಂಗ್ರೆಸ್ ಪಕ್ಷ ಸೋತಿದೆ, ಮೋದಿಯವರನ್ನು ವಿಷದ ಹಾವು ಎಂದು ಖರ್ಗೆ ಹೇಳಿದ್ದಾರೆ.
Related Articles
Advertisement
ಮಹೇಶ ಕುಮಠಳ್ಳಿ ಮಾತನಾಡಿ, ಅಥಣಿ ಮತಕ್ಷೇತ್ರಕ್ಕೆ ಗೋಕಾಕ ಸಾಹುಕರ ರಿಂದ ಬಯವಿಲ್ಲ, ಆದರೆ ಅಥಣಿ ಸಾಹುಕಾರರಿಂದ ಅಥಣಿ ಜನತೆಗೆ ಬಯವಿದೆ, ಬಜರಂಗದಳವನ್ನು ನಿಷೇಧಿಸಲು ಹೊರಟಿರುವವರಿಗೆ ಬುದ್ದಿ ಕಲಿಸಿ, ಬಿಜೆಪಿವನ್ನು ಗೆಲ್ಲಿಸಲು 1 ನಂಬರಿನಲ್ಲಿರುವ ಕಮಲ ಚಿತ್ರಕ್ಕೆ ಮತವನ್ನು ನೀಡುವಂತೆ ಮನವಿ ಮಾಡಿದರು.
ಶ್ರೀಮಂತ ಪಾಟೀಲ ಮಾತನಾಡಿ, ಅಥಣಿ ಸಿದ್ದೇಶ್ವರ ಪಾಂಡ್ರಿಯಲ್ಲಿ ಯಾರು ಸೊಕ್ಕಿನಿಂದ ಮೇರೆಯುತ್ತಾರೆ ಅವರೆಂದು ಉದ್ದಾರವಾಗುವುದಿಲ್ಲ ಪರೋಕ್ಷವಾಗಿ ಲಕ್ಷ್ಮಣ ಸವದಿಯವರ ಕುರಿತು ಟೀಕೆಯನ್ನು ಮಾಡಿದರು. ಬಿಜೆಪಿಯನ್ನು ತನ್ನ ತಾಯಿ ಎಂದು ಹೇಳಿದ ಸವದಿಯವರು ಇವತ್ತು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ, ಮೋಸ ಮಾಡುವವರಿಗೆ ಬುದ್ದಿ ಕಲಿಸಿ ಮಹೇಶ ಕುಮಠಳ್ಳಿ ಅವರನ್ನು ಆರಿಸಿ ತರುವಂತೆ ಮನವಿ ಮಾಡಿದರು.
ಅರವಿಂದರಾವ ದೇಶಪಾಂಡೆ, ಬಿ.ಎಲ್.ಪಾಟೀಲ, ರವಿ ಸಂಕ, ಅಪ್ಪಾಸಾಬ ಅವತಾಡೆ, ಸತ್ಯಾಪ್ಪ ಬಾಗೇನ್ನವರ, ದರೇಪ್ಪ ಟಕ್ಕನವರ, ಗೌತಮ್ಮ ಪರಾಂಜಪೆ, ಉಮೇಶ ಬಂಟೋಡಕರ, ವಿಜಯಕುಮಾರ, ಅನೀಲ ದೇಶಪಾಂಡೆ, ಬಸವರಾಜ ಕೊಂಪಿ, ರಾಜಕುಮಾರ ಐಹೊಳಿ ಸೇರಿದಂತೆ ಅನೇಕರು ಇದ್ದರು.