Advertisement

ಬೆಳಕಿನ ಹಬ್ಬಕ್ಕೆ ಹಣತೆ ವ್ಯಾಪಾರ ಜೋರು

08:36 PM Nov 14, 2020 | Suhan S |

ದೇವನಹಳ್ಳಿ: ಕೋವಿಡ್ ಕರಿನೆರಳಿನಲ್ಲಿ ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ಜೇಡಿ ಮಣ್ಣಿನಿಂದ ಬಣ್ಣ ಬಣ್ಣದ ಹಣತೆಗಳು ಸಿದ್ಧವಾಗಿವೆ. ಅಲ್ಲದೆ, ದೀಪಾಲಂಕಾರಕ್ಕೆ ಹತ್ತಾರು ಮಾದರಿಯಲ್ಲಿ ಹಣತೆಗಳು ಮಾರಾಟಕ್ಕೆ ಇಡಲಾಗಿದೆ.

Advertisement

ದೀಪಾವಳಿಗೆ ಸಂಪ್ರದಾಯ, ಧಾರ್ಮಿಕ, ಐತಿಹಾಸಿಕ ಪರಂಪರೆಯಿದೆ. ವಿಶೇಷವಾಗಿ ಮಣ್ಣಿನ ಹಣತೆಗಳು ಕಣ್ಮನ ಸೆಳೆಯುತ್ತಿದೆ. ನಗರದಲ್ಲಿ ಹಣತೆಗಳ ಖರೀದಿ ಜೋರಾಗಿನಡೆದಿದೆ.ಹತ್ತಾರುಮಾದರಿಯಹಣತೆಗಳು ಮಾರಾಟಕ್ಕಿಡಲಾಗಿದೆ. ಹಣತೆಗಳ ಬೆಲೆ ಹೆಚ್ಚಾಗಿದ್ದರೂ, ಹಬ್ಬ ಆಚರಿಸಲು ಜನ ಖರೀದಿಯಲ್ಲಿ ತೊಡಗಿದ್ದಾರೆ. ನಗರದ ವಿವಿಧ ಕಡೆಗಳಲ್ಲಿ ತಳ್ಳುವ ಗಾಡಿಗಳಲ್ಲಿ, ರಸ್ತೆಬದಿಗಳಲ್ಲಿ ಹಣತೆಗಳ ಮಾರಾಟ ಜೋರಾಗಿಯೇ ಇದೆ. ಸಾಮಾನ್ಯವಾಗಿ ಮಣ್ಣಿನ ದೀಪ, ಪಿಂಗಾಣಿದೀಪ ಹೆಚ್ಚಿನ ಬೇಡಿಕೆ ಇದ್ದು, ಮಣ್ಣಿನ ಅಲಂಕಾರಿಕ ವಸ್ತುಗಳು 5 ರೂ.ನಿಂದ 150 ರೂ. ವರೆಗೆ ವ್ಯಾಪಾರ ಮಾಡಲಾಗುತ್ತಿದೆ. ಈಗಾಗಲೇ ಜಿಲ್ಲಾಡಳಿತ ಪಟಾಕಿ ಮಾರಾಟ ಮತ್ತು ಸುಡುವುದನ್ನು ನಿಷೇಧಿಸಿದೆ. ಹಸಿರು ಪಟಾಕಿಗೆ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದೆ.

ವಿವಿಧ ರೀತಿಯ ದೀಪಗಳು: ವಿವಿಧ ವಿನ್ಯಾಸದ ಹಣತೆ ದೀಪಗಳು ತಯಾರಿಸುವುದರಲ್ಲದೆ, ತೆಂಗಿನ ಕಾಯಿ ಮಾದರಿಯ ಆಕಾರ ಅದರಲ್ಲಿ ದೀಪ, ತಳಸಿಕಟ್ಟೆ, ಬೃಂದಾವನ, ತಟ್ಟೆಯ ಹಣತೆ, ಒಂದು ದೀಪದಲ್ಲಿ 2 ಹಾಗೂ 5 ಕಡೆ ಬತ್ತಿ ಹಾಕುವ ರೀತಿಯಲ್ಲಿ ಹಣತೆಯ ವಿನ್ಯಾಸ, ಮನೆ ಬಾಗಿಲಿನಲ್ಲಿ ದೀಪವಿಟ್ಟಾಗ ಗಾಳಿಯಲ್ಲಿ ಹಾರಿಹೋಗದಂತೆ ಪುರಾತನ ಕಾಲದ ಲ್ಯಾಂಪ್‌ ರೀತಿಯ ದೀಪಗಳು ಗಮನ ಸೆಳೆಯುತ್ತಿದೆ.

ಕೋವಿಡ್ ದಿಂದ ಕುಂಬಾರಿಕೆ ಕಷ್ಟವಾಗುತ್ತಿದೆ. ಹಣತೆಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಸಾಮಾನ್ಯರಿಗೂ ಕೈಗೆಟುಕುವ ಬೆಲೆಯಲ್ಲಿ ಹಣತೆ ದೊರೆಯುತ್ತಿದೆ. ಗ್ರಾಹಕರುಖರೀದಿಸುತ್ತಿದ್ದಾರೆ. ಭಾಗ್ಯ, ವ್ಯಾಪಾರಸ್ಥರು

ಜೇಡಿ ಮಣ್ಣಿನ ದೀಪಗಳನ್ನುಖರೀದಿಸುತ್ತಿದ್ದೇವೆ. ಈ ಬಾರಿ ದೀಪಾವಳಿ ಹಬ್ಬವನ್ನು ಸರಳವಾಗಿ ಆಚರಿಸುತ್ತಿದ್ದೇವೆ. ಕೋವಿಡ್ ಇಡೀ ವಿಶ್ವವನ್ನು ಬಿಟ್ಟು ತೊಲಗುವಂತೆ ಆಗಬೇಕು. ರೂಪಾ, ಗ್ರಾಹಕರು

Advertisement

ಈ ಬಾರಿ ದೀಪಾವಳಿ ಹಬ್ಬವನ್ನು ಸರಳವಾಗಿ ಆಚರಿಸುತ್ತಿದ್ದೇವೆ.ಕೊರೊನಾ ಇಡೀ ವಿಶ್ವವನ್ನು ಬಿಟ್ಟು ತೊಲಗುವಂತೆ ಆಗಬೇಕು. ರೂಪಾ, ಗ್ರಾಹಕರು

ಜಿಲ್ಲೆಯಲ್ಲಿ ಕೋವಿಡ್ ದಿಂದ ಪಟಾಕಿ ನಿಷೇಧ ಮಾಡಲಾಗಿದೆ. ದೀಪಾವಳಿ ಹಬ್ಬವನ್ನು ಸರಳವಾಗಿ ಆಚರಿಸಬೇಕು. ಹಸಿರು ಪಟಾಕಿ ಬಳಸಬೇಕು. ಸುರಕ್ಷತಾ ಕ್ರಮ ಪಾಲಿಸಿ, ಮಾಲಿನ್ಯ ರಹಿತ ದೀಪಾವಳಿ ಆಚರಿಸಬೇಕು. ಪಿ.ಎನ್‌.ರವೀಂದ್ರ, ಜಿಲ್ಲಾಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next