Advertisement

ದೀಪಕ್‌ ರಾವ್‌ಗೆ ಶ್ರದ್ಧಾಂಜಲಿ

11:08 AM Jan 08, 2018 | Team Udayavani |

ಕಾಟಿಪಳ್ಳ : ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ದೀಪಕ್‌ ರಾವ್‌ ಅವರಿಗೆ ಶ್ರದ್ಧಾಂಜಲಿ ಅರ್ಪಣೆ ಸಭೆ ಕಾಟಿಪಳ್ಳ ನಾರಾಯಣಗುರು ಶಾಲಾ ಮೈದಾನದಲ್ಲಿ ಜರಗಿತು. ವಿಶ್ವ ಹಿಂದೂ ಪರಿಷತ್‌ ಮುಖಂಡ ಎಂ.ಬಿ. ಪುರಾಣಿಕ್‌, ಸಂಘದ ಮುಖಂಡರಾದ ವಾಮನ್‌ ಶೆಣೈ ನುಡಿನಮನ ಸಲ್ಲಿಸಿದರು.

Advertisement

ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ರಾಷ್ಟ್ರ, ಧರ್ಮ ಕಾರ್ಯಕ್ಕಾಗಿ ಕೆಲಸ ಮಾಡುತ್ತಿದ್ದ ದೀಪಕ್‌ ಮತ್ತೆ ಇದೇ ನೆಲದಲ್ಲಿ ಹುಟ್ಟಿ ಬರಲಿ. ಆತನ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದರು. ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್‌, ಡಾ| ವೈ. ಭರತ್‌ ಶೆಟ್ಟಿ, ಜಗದೀಶ್‌ ಶೇಣವ, ಶರಣ್‌ ಪಂಪ್‌ ವೆಲ್‌, ಮನೋಜ್‌ ಕೋಡಿಕೆರೆ, ತಿಲಕ್‌ ರಾಜ್‌ ಕೃಷ್ಣಾಪುರ, ಗುಣಶೇಖರ ಶೆಟ್ಟಿ, ಹರೀಶ್‌ ಶೆಟ್ಟಿ, ಗಣೇಶ್‌ ಹೊಸಬೆಟ್ಟು, ವಿಟ್ಠಲ್‌ ಸಾಲ್ಯಾನ್‌ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next