Advertisement

ದೀಪಕ್‌ ರಾವ್‌ ಕೊಲೆ ಪ್ರಕರಣ: 6 ಮಂದಿಗೆ ಪೊಲೀಸ್‌ ಕಸ್ಟಡಿ 

12:13 PM Jan 26, 2018 | |

ಮಂಗಳೂರು: ದೀಪಕ್‌ ರಾವ್‌ ಕೊಲೆ ಸಂಬಂಧಿಸಿ ಬುಧವಾರ ಬಂಧಿತರಾದ  6 ಮಂದಿಗೆ  3 ದಿನಗಳ ಪೊಲೀಸ್‌ ಕಸ್ಟಡಿ ವಿಧಿಸಲಾಗಿದೆ. 

Advertisement

ಚೊಕ್ಕಬೆಟ್ಟಿನ ಮಹಮ್ಮದ್‌ ರಫೀಕ್‌ ಯಾನೆ ಮ್ಯಾಂಗೋ ರಫೀಕ್‌, ಇರ್ಫಾನ್‌, ಕಾಟಿಪಳ್ಳದ ಮಹಮ್ಮದ್‌ ಅನಸ್‌ ಯಾನೆ ಅಂಚು, ಮಹಮ್ಮದ್‌ ಜಾಹೀದ್‌ ಯಾನೆ ಜಾಹೀ, ಹಿದಾಯತುಲ್ಲಾ ಹಾಗೂ ಚೊಕ್ಕಬೆಟ್ಟಿನ ಇಮ್ರಾನ್‌ ನವಾಝ್ ಪೊಲೀಸ್‌ ಕಸ್ಟಡಿಗೆ ಒಳಗಾದವರು. ಅವರ ಮೇಲೆ    ಕೊಲೆ ಸಂಚು ಹಾಗೂ ಕೃತ್ಯಕ್ಕೆ ನೆರವು ನೀಡಿದ ಆರೋಪವಿದೆ.

ಶಿವರಾಜ್‌ ಕೊಲೆ   ಆರೋಪಿಗಳು  ನ್ಯಾಯಾಂಗ ಬಂಧನಕ್ಕೆ: ತಣ್ಣೀ ರುಬಾವಿಯ ಬೊಕ್ಕಪಟ್ಣದಲ್ಲಿ ಸೋಮವಾರ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದ ಮೂವರು ಆರೋಪಿಗಳನ್ನು ಪೊಲೀಸ್‌ ಕಸ್ಟಡಿಯಿಂದ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

ಆರೋಪಿಗಳಾದ ತಣ್ಣೀರು ಬಾವಿಯ ಸುನಿಲ್‌ ಪೂಜಾರಿ (32), ಧೀರಜ್‌ (25) ಮತ್ತು ಮೂಲತಃ ಗದಗದ, ಪ್ರಸ್ತುತ ತಣ್ಣೀರುಬಾವಿಯಲ್ಲಿ ವಾಸವಾಗಿರುವ  ಮಲ್ಲೇಶ ಯಾನೆ ಮಾದೇಶ (23) ಅವರ ಎರಡು ದಿನಗಳ  ಪೊಲೀಸ್‌ ಕಸ್ಟಡಿ ಗುರುವಾರ ಮುಗಿದಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next