Advertisement

ದೀಪಕ್‌ ಕೊಲೆ: ಇಬ್ಬರಿಗೆ ನ್ಯಾಯಾಂಗ ಬಂಧನ 

11:54 AM Jan 12, 2018 | Team Udayavani |

ಮಂಗಳೂರು:  ದೀಪಕ್‌ ರಾವ್‌ ಕೊಲೆ ಪ್ರಕರಣದ ಆರೋಪಿಗಳಾದ ನೌಶಾದ್‌ ಮತ್ತು ಮೊಹಮ್ಮದ್‌ ಇರ್ಷಾನ್‌ ಅವರಿಗೆ ಜ. 24ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Advertisement

ಆರೋಪಿಗಳನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸ ಲಾಗಿತ್ತು. ಅವರನ್ನು ಜ. 4ರಂದು  ಕಸ್ಟಡಿಗೆ ಪಡೆದುಕೊಳ್ಳಲಾಗಿತ್ತು. ಕಸ್ಟಡಿ ತನಿಖೆ ವೇಳೆ ಕೆಲವು ಮಹತ್ವದ ಸಂಗತಿಗಳನ್ನು ಆರೋಪಿಗಳು ಬಾಯಿಬಿಟ್ಟಿದ್ದು, ಈ ಆಧಾರದಲ್ಲಿ ತನಿಖೆ ಮುಂದುವರಿದಿದೆ.

ಮತ್ತಿಬ್ಬರು ಇಂದು ಕೋರ್ಟ್‌ಗೆ?
ಪೊಲೀಸ್‌ ಕಾರ್ಯಾಚರಣೆ ವೇಳೆ ಗಾಯಗೊಂಡು  ಚಿಕಿತ್ಸೆ ಪಡೆಯು ತ್ತಿರುವ ಇನ್ನಿಬ್ಬರು ಆರೋಪಿಗಳಾದ ಪಿಂಕಿ ನವಾಜ್‌ ಮತ್ತು ರಿಜ್ವಾನ್‌ ತನಿಖೆ ಇನ್ನಷ್ಟೇ ಆಗಬೇಕಿದೆ. ಶುಕ್ರ ವಾರ ಅವರನ್ನು ಆಸ್ಪತ್ರೆಯಿಂದ ಬಿಡು ಗಡೆಗೊಳಿಸಿ ಕೋರ್ಟ್‌ಗೆ ಹಾಜರು ಪಡಿಸುವ ಸಾಧ್ಯತೆಯಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next