Advertisement

ಸಾಲ ಮನ್ನಾ ಮುಖ್ಯಮತ್ರಿಗಳ ಸಾಧನೆ: ಗೋಪಾಲ ಭಂಡಾರಿ

06:40 AM Aug 02, 2017 | Team Udayavani |

ಹೆಬ್ರಿ: ರಾಜ್ಯದ ಕಾಂಗ್ರೆಸ್‌ ಸರಕಾರ ಮತ್ತು ಮುಖ್ಯಮಂತ್ರಿಗಳ ಸಾಧನೆಗಳಾದ ಅನ್ನಭಾಗ್ಯ, ಕ್ಷೀರಭಾಗ್ಯ ಮತ್ತು ಹಾಲು ಉತ್ಪಾದಕರಿಗೆ ಲೀಟರ್‌ ಒಂದರ 5 ರೂ. ಸಬ್ಸಿಡಿ ನೀಡಿ ಬಡ ರೈತರಿಗೆ ಕೂಲಿ ಕಾರ್ಮಿಕರಿಗೆ ಪ್ರೋತ್ಸಾಹ ನೀಡುತ್ತಿರುವುದಲ್ಲದೆ ಸರ್ಕಾರ ಆಡಳಿತ ಅವಧಿ 5 ವರ್ಷವನ್ನು ಅಭಿವೃದ್ಧಿ ಪರ ಪೂರೈಸುತ್ತಿರುವುದರೊಂದಿಗೆ ಸಾಲ ಮನ್ನ ಮಾಡಿರುವುದು ಶ್ಲಾಘನೀಯ ಎಂದು ಮಾಜಿ ಶಾಸಕ ಎಚ್‌.ಗೋಪಾಲ ಭಂಡಾರಿ ಹೇಳಿದರು.
ಅವರು ಜು. 30ರಂದು ಮರಾಠಿ ಸಭಾ ಭವನದಲ್ಲಿ ಚಾರ ಗ್ರಾಮದ ಗ್ರಾಮೀಣ ಕಾಂಗ್ರೆಸ್‌ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. 

Advertisement

ಸಭೆಯ ಅಧ್ಯಕ್ಷತೆಯನ್ನು ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ಚಾರ ವಾದಿರಾಜ ಶೆಟ್ಟಿ ವಹಿಸಿದ್ದರು. 
ಈ ಸಂದರ್ಭದಲ್ಲಿ ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಮುನಿಯಾಲು ಉದಯ ಶೆಟ್ಟಿ, ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಉಪಾಧ್ಯಕ್ಷರಾದ ಮಂಜುನಾಥ ಪೂಜಾರಿ, ಸುರೇಶ್‌ ಶೆಟ್ಟಿ ಹೆಬ್ರಿ, ಶೀನ ಪೂಜಾರಿ ಹಾಡಿಮನೆ, ಚಾರ ಗ್ರಾ.ಪಂ. ಅಧ್ಯಕ್ಷ ಸಂದೀಪ್‌, ನವೀನ್‌ ಅಡ್ಯಂತಾಯ, ಸಂತೋಷ್‌ ಶೆಟ್ಟಿ, ಮೊದಲಾದವರಿದ್ದರು. 

ಗ್ರಾಮ ಪಂಚಾಯತ್‌ ಸದಸ್ಯ ದಿನೇಶ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸಂತೋಷ್‌ ಶೆಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next