Advertisement

ಪಲ್ಲಕ್ಕಿ ಉತ್ಸವದಲ್ಲಿ ಗುಂಡು ತಾಗಿ ಸಾವು

01:15 AM Feb 21, 2019 | Team Udayavani |

ಮೂಡಲಗಿ: ತಾಲೂಕಿನ ಢವಳೇಶ್ವರ ಗ್ರಾಮದಲ್ಲಿ ಬುಧವಾರ ನಡೆಯುತ್ತಿದ್ದ ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ಆಕಸ್ಮಿಕವಾಗಿ ರಿವಾಲ್ವರ್‌ ಗುಂಡು ತಾಗಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ.  ಗ್ರಾಮದ ನಿಜಗುಣಿಮಹಾರುದ್ರಪ್ಪ ಅಂಗಡಿ (38) ಮೃತ ವ್ಯಕ್ತಿ.

Advertisement

ಢವಳೇಶ್ವರ ಗ್ರಾಮದ ಉಳಿಮುಟ್ಟದ ರಂಗೇಶ್ವರ ದೇವಸ್ಥಾನದ ಕಾರ್ತಿಕ ಜಾತ್ರಾ ಮಹೋತ್ಸವದ ನಿಮಿತ್ತ ಬುಧವಾರ ಪಲ್ಲಕ್ಕಿ ಉತ್ಸವ ನಡೆಯುತ್ತಿತ್ತು. ಪಲ್ಲಕ್ಕಿ ಉತ್ಸವ ದೇವಸ್ಥಾನದ ಆವರಣದಲ್ಲಿ ಐದು ಸುತ್ತು ಸುತ್ತುವಾಗ ಪ್ರತಿ ಸುತ್ತಿಗೆ ಒಂದು ಬಾರಿ ಗಾಳಿಯಲ್ಲಿ ಗುಂಡು ಹಾರಿಸುವ ಪದ್ಧತಿ ಇದೆ. ಆ ಪ್ರಕಾರ ಪಲ್ಲಕ್ಕಿ ಉತ್ಸವದಲ್ಲಿ ನಾಲ್ಕು ಸುತ್ತುಗಳಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ, ಐದನೇ ಸುತ್ತಿಗೆ ಮಹಾದೇವ ಭೀಮಪ್ಪ ನಾಡಗೌಡರ ಎಂಬುವರು ಗುಂಡು ಹಾರಿಸುವ ಸಮಯದಲ್ಲಿ ಆಕಸ್ಮಿಕವಾಗಿ ಪಕ್ಕದಲ್ಲಿದ್ದ ಅಂಗಡಿಯ ತಲೆಯ ಬಲ ಭಾಗಕ್ಕೆ ಗುಂಡು ತಾಗಿತು. ಗಂಭೀರವಾಗಿ ಗಾಯಗೊಂಡ ಅವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದರು.

Advertisement

Udayavani is now on Telegram. Click here to join our channel and stay updated with the latest news.

Next