Advertisement

ಕೆರೆಯಲ್ಲಿ ಬಿದ್ದು ಯುವಕರಿಬ್ಬರ ಸಾವು

10:49 PM Oct 09, 2019 | Team Udayavani |

ಕಲಬುರಗಿ: ದಸರಾ ಅಂಗವಾಗಿ ಮನೆಯಲ್ಲಿ ದೇವಿ ಹೆಸರಲ್ಲಿ ಹಾಕಿದ್ದ ಸಸಿಗಳನ್ನು ಕೆರೆಯಲ್ಲಿ ಬಿಡಲು ಹೋದ ಯುವಕರಿಬ್ಬರು ಮೃತಪಟ್ಟ ಘಟನೆ ತಾಲೂಕಿನ ಕೊಳ್ಳೂರಲ್ಲಿ ಬುಧವಾರ ನಡೆದಿದೆ.

Advertisement

ದಸರಾ ಹಬ್ಬದ ಅಂಗವಾಗಿ 9 ದಿನಗಳ ಕಾಲ ದೇವಿ ಹೆಸರಲ್ಲಿ ಘಟಸ್ಥಾಪನೆ ಮಾಡಿದ ನಂತರ, ದೇವರ ಎದುರಲ್ಲಿ ಬೆಳೆದ ಸಸಿಯನ್ನು ವಿಜಯದಶಮಿ ಮರುದಿನ ಕೆರೆ, ಬಾವಿ, ಹಳ್ಳಗಳಲ್ಲಿ ವಿಸರ್ಜನೆ ಮಾಡಲಾಗುತ್ತದೆ.

ಈ ಪದ್ಧತಿಯಂತೆ ಸಸಿಗಳನ್ನು ಕೊಳ್ಳೂರ ಗ್ರಾಮದ ಬಳಿಯಿರುವ ಗೊಬ್ಬೂರ ಕೆರೆಯಲ್ಲಿ ರುವ ಹಿನ್ನೀರಿನಲ್ಲಿ ಬಿಡಲು ಹೋದ ಗಣೇಶ ನಿಂಗಯ್ನಾ ಗುತ್ತೇದಾರ (18), ಗೋಪಾಲ ಸುರೇಶ ಪಾಟೀಲ (19) ಕಾಲು ಜಾರಿ ಬಿದ್ದು, ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next