Advertisement

ಈಜಲು ಹೋದ ಮಕ್ಕಳಿಬರು ಸಾವು

08:31 PM Jan 16, 2021 | Team Udayavani |

ಹೊಸಕೋಟೆ: ನಗರದ ಗಣಗಲು ರಸ್ತೆಯಲ್ಲಿರುವ ಗ್ರ್ಯಾಡ್‌ ಬಾಲಾಜಿ ಬಡಾವಣೆ ಪಕ್ಕದಲ್ಲಿ ಕೃಷಿ ಚಟುವಟಿಕೆಗಾಗಿ ನಿರ್ಮಾಣ ಮಾಡಿದ್ದ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಐವರು ಮಕ್ಕಳಲ್ಲಿ ಇಬ್ಬರು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ವರ್ಷಿಣಿ(9), ಯಶ್ವಿ‌ನ್‌ಗೌಡ(8) ಮೃತ ಮಕ್ಕಳು.

Advertisement

ಇದನ್ನೂ ಓದಿ:ಹಲಸಿಗೆ ತೊಟ್ಟು ತಿನ್ನುವ ರೋಗ

ಮಕ್ಕಳನ್ನು ಹೊಂಡರಿಂದ ಮೇಲಕ್ಕೆತ್ತಿ ಆಸ್ಪತ್ರೆ ದಾಖಲಿಸಿದಾಗ, ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆಂದು ವೈದ್ಯರು ತಿಳಿಸಿದರು. ಈ ವೇಳೆ ಸುದ್ದಿ ತಿಳಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹಗಳನ್ನು ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಹೊಸಕೋಟೆ ಪಿಎಸ್‌ಐ ರಾಜು ಪ್ರಕರಣದ ಸಂಬಂಧ ಸ್ಥಳ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next