Advertisement

ಮುಧೋಳ : ಆಕ್ಸಿಜನ್ ಬೆಡ್ ಸಿಗದೆ ಯುವಕ ಆಸ್ಪತ್ರೆ ಎದುರೇ ಸಾವು

09:54 AM May 12, 2021 | Team Udayavani |

ಮುಧೋಳ : ಸೂಕ್ತ ಸಮಯಕ್ಕೆ ಆಕ್ಸಿಜನ್ ಹಾಗೂ ಬೆಡ್ ಸಿಗದೆ ಯುವಕನೋರ್ವ ಆಸ್ಪತ್ರೆ ಬಾಗಿಲಲ್ಲೆ ನರಳಾಡಿ ಪ್ರಾಣಬಿಟ್ಟ ಘಟನೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.

Advertisement

ರಾಮದುರ್ಗ ತಾಲೂಕಿನ ಕುನಾಳ ಗ್ರಾಮದ ತಿಮ್ಮಣ್ಣ ಬಂಡಿವಡ್ಡರ (36) ಮೃತ ಯುವಕ. ಕೋವಿಡ್ ಹಿನ್ನೆಲೆ‌ ತಿಮ್ಮಣ್ಣನ ಕುಟುಂಬಸ್ಥರು ಮಂಗಳವಾರ ರಾತ್ರಿ ಚಿಕಿತ್ಸೆಗಾಗಿ ತಿಮ್ಮಣ್ಣನನ್ನು ಕರೆತಂದಿದ್ದಾರೆ.  ಆ ವೇಳೆಯಲ್ಲಿ ಆಸ್ಪತ್ರೆಯಲ್ಲಿ ಬೆಡ್ ಗಳು ಖಾಲಿ ಇರದ ಕಾರಣ ಅವರನ್ನು ಬಾಗಲಕೋಟೆಗೆ ಕರೆದ್ಯೊಯಲು ಸ್ಥಳೀಯ ವೈದ್ಯರು ಸೂಚಿಸಿದ್ದಾರೆ.

ತಿಮ್ಮಣ್ಣನ ಕುಟುಂಬಸ್ಥರಿಗೆ ಬಾಗಲಕೋಟೆ ಆಸ್ಪತ್ರೆಯಲ್ಲಿಯೂ ಬೆಡ್ ದೊರೆಯದ ಕಾರಣ ಮರಳಿ ಮುಧೋಳ ಆಸ್ಪತ್ರೆಗೆ ಮರಳಿದ್ದಾರೆ. ಈ ವೇಳೆ ಸೋಂಕಿತ ಉಸಿರಾಟದ ತೊಂದರೆಯಿಂದ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next