Advertisement

ಬೆಳ್ತಂಗಡಿ: ನಾಪತ್ತೆಯಾಗಿದ್ದ ನಿವೃತ್ತ ಮುಖ್ಯೋಪಾಧ್ಯಾಯರ ಶವ ಬಿಸಿಲೆ ಘಾಟ್‌ನಲ್ಲಿ ಪತ್ತೆ

06:57 PM Oct 27, 2020 | sudhir |

ಬೆಳ್ತಂಗಡಿ: ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಉಜಿರೆ ಎಸ್‌.ಡಿ.ಎಂ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಪದವೀಧರ ನಿವೃತ್ತ ಮುಖ್ಯೋಪಾಧ್ಯಾಯ ಉಜಿರೆ ರಾಮಕೃಷ್ಣ ನಗರದ ಪ್ರಸನ್ನ ಕುಮಾರ್‌ ಎಂ. (65) ಅವರು ಅ. 26ರಂದು ಸುಬ್ರಹ್ಮಣ್ಯದ ಬಿಸಿಲೆ ಘಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

Advertisement

ಮೃತರು ಬೆಳಾಲು ಎಸ್‌.ಡಿ.ಎಂ. ಪ್ರೌಢಶಾಲೆಯ ಶಿಕ್ಷಕಿ ಪತ್ನಿ ರಾಜಶ್ರೀ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರು ಅ. 22ರ ಬೆಳಗ್ಗೆ ಹಾಲು ತರಲೆಂದು ಉಜಿರೆ ಡೇರಿಗೆ ಹೋದವರು ಬೈಕ್‌ ಸಮೇತ ನಾಪತ್ತೆಯಾಗಿದ್ದರು. ಅನಂತರ ಅವರ ಮೊಬೈಲ್‌ ಲೊಕೇಶನ್‌ ಪರಿಶೀಲನೆ ಮಾಡಿದಾಗ ಕೊಕ್ಕಡ ಸಮೀಪದ ಪಾರ್ಪಿಕಲ್ಲಿನ ಸಮೀಪ ಇರುವುದು ಗೊತ್ತಾಗಿತ್ತು. ಬಳಿಕ ಹುಡುಕಾಟ ನಡೆಸಿದಾಗ ಬಿಸಿಲೆ ಘಾಟ್‌ನಲ್ಲಿ ಅವರ ಶವ ಮತ್ತು ಬೈಕ್‌ ಪತ್ತೆಯಾಗಿದೆ.

ಅವರು ನಾಪತ್ತೆಯಾಗಿದ್ದ ಕುರಿತು ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next