Advertisement

ಸಮರ್ಪಣಾ ಮನೋಭಾವದಿಂದ ದೇಣಿಗೆ ನೀಡಿ

04:41 PM Feb 08, 2021 | Team Udayavani |

ಕುದೂರು: ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಾಡಿನ ಪ್ರತಿಯೊಬ್ಬ ನಾಗರಿಕರು ಸಮರ್ಪಣಾ ಮನೋಭಾವದಿಂದ ದೇಣಿಗೆ ನೀಡಬೇಕು ಎಂದು ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದರು.

Advertisement

ಪಟ್ಟಣದಲ್ಲಿ ರಾಮ ಮಂದಿರ ನಿರ್ಮಾಣ ನಿಧಿ ಸಂಗ್ರಹಕ್ಕೆ ಚಾಲನೆ ನೀಡಿ ಮಾತನಾಡಿ, ರಾಮ ಮಂದಿರ  ಹಿಂದೂಗಳ ಪವಿತ್ರ ಶ್ರದ್ಧಾಕೇಂದ್ರವಾಗಲಿದೆ. ನಾವಿರುವ ದಿನಗಳಲ್ಲೇ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ನೋಡುವ ಭಾಗ್ಯ ಸಿಕ್ಕಿದೆ. ಇದು ನಮ್ಮ ಪುಣ್ಯ. ಪ್ರತಿಯೊಬ್ಬರು ಬೇಧ ಭಾವವಿಲ್ಲದೇ ಕೈಲಾದ ದೇಣಿಗೆ ನೀಡುತ್ತಿದ್ದು, ಇದೊಂದು ಬೃಹತ್‌ ಅಭಿಯಾನವಾಗಿದೆ. ಶ್ರೀರಾಮನ ತತ್ವಾದರ್ಶದಡಿ ದೇಶ ನಿರ್ಮಾಣವಾಗಲಿದೆ ಎಂದರು.

ಜಿಲ್ಲಾ ಪ್ರಮುಖ ಗುರುಪ್ರಸಾದ್‌ ಮಾತನಾಡಿ, ಹಿಂದೂಗಳ ಕನಸಾಗಿದ್ದ ರಾಮ ಮಂದಿರ ನಿರ್ಮಾಣಕ್ಕೆ ಎಲ್ಲರೂ ದೇಣಿಗೆ ನೀಡಿ ಶ್ರೀರಾಮನ ಕೃಪೆಗೆ ಪಾತ್ರರಾಗಬೇಕು ಎಂದು ಹೇಳಿದರು.

ಇದನ್ನೂ ಓದಿ :“ರಾಗ ಭೈರವಿ’ ಪ್ರೀಮಿಯರ್‌ ಶೋ ಪ್ರದರ್ಶನ

ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಡಾ.ಎಂ.ಜಿ. ರಂಗಧಾಮಯ್ಯ ಮಾತನಾಡಿ, ಶ್ರೀರಾಮ ಮಂದಿರ ರಾಷ್ಟ್ರೀಯ ಶ್ರದ್ಧಾ ಕೇಂದ್ರವಾಗಿ ಮೂಡಿಬರಲಿದೆ. ವಿವಿಧ ಕಂಪನಿ ಹಾಗೂ ಭಕ್ತರಿಂದ ಸಂಗ್ರಹವಾದ 19  ಲಕ್ಷಕ್ಕೂ ಹೆಚ್ಚು ರೂ.ಗಳ ಚೆಕ್‌ ಅನ್ನು ಡಿಸಿಎಂ ಗೆ ಹಸ್ತಾಂತರಿಸಲಾಗಿದೆ ಎಂದರು.

Advertisement

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ತಾಲೂಕು ಬಜೆಪಿ ಅಧ್ಯಕ್ಷ ಬಿ.ಎಂ.ಧನಂಜಯ, ತಹಶೀಲ್ದಾರ್‌ ಬಿ.ಜಿ.ಶ್ರೀನಿವಾಸ್‌, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ  ಡಾ.ಎಚ್‌. ಎಂ.ಕೃಷ್ಣಮೂರ್ತಿ, ಪ್ರಸಾದ್‌ ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next