Advertisement

ಡಿಸಿಎಂ ಸ್ಥಾನ ಕೊಡದಿದ್ದರೆ ಬಳಿಕ ನಿರ್ಧಾರ: ಶ್ರೀರಾಮುಲು

10:59 PM Dec 25, 2019 | Team Udayavani |

ಯಾದಗಿರಿ: “ನಾನು ಡಿಸಿಎಂ ಆಗಬೇಕು ಎನ್ನುವುದು ಜನರ ಒತ್ತಾಯ. ಅದನ್ನು ತಿರಸ್ಕರಿಸಲ್ಲ. ಜನರ ಅಪೇಕ್ಷೆಯನ್ನು ಸರ್ಕಾರ ಕೇಳುತ್ತಿದೆ. ಸಿಎಂ ಯಡಿಯೂರಪ್ಪ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ಡಿಸಿಎಂ ಸ್ಥಾನ ನೀಡದಿದ್ದರೆ ಮುಂದೆ ನೋಡೋಣ’ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.

Advertisement

ಶಹಾಪುರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಾಲ್ಮೀಕಿ ಸಮಾಜಕ್ಕೆ ಶೇ.7.5ರಷ್ಟು ಮೀಸಲಾತಿ ನೀಡುವ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಸಮಾಜದ ಹಿತಕ್ಕಾಗಿ ಪ್ರಸನ್ನಾನಂದಪುರಿ ಸ್ವಾಮೀಜಿ ಹಾಗೂ ಶಾಸಕರು ನೀಡಿದ ಹೇಳಿಕೆಗೆ ನಾನು ಬದ್ಧ. ನ್ಯಾ| ನಾಗಮೋಹನದಾಸ್‌ ವರದಿ ಬಂದ ನಂತರ ಸಿಎಂ ಜತೆ ಚರ್ಚಿಸಲಾಗುವುದು. ವರದಿ ನಂತರ ಮೀಸಲಾತಿ ನೀಡುವ ಬಗ್ಗೆ ಸಿಎಂ ನಿರ್ಧಾರ ಕೈಗೊಳ್ಳಲಿದ್ದಾರೆ. ಸರ್ಕಾರಕ್ಕೆ ಯಾವುದೇ ಗಡುವು ನೀಡಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next