Advertisement

ಕ್ವಾರಂಟೈನ್‌ನಲ್ಲಿರುವವರ ಮಾಹಿತಿ ಸಂಗ್ರಹಿಸಿದ ಡಿಸಿ

11:39 PM Jun 06, 2020 | Sriram |

ಬಂಟ್ವಾಳ: ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ನೇತೃತ್ವದ ಕಂದಾಯ ಇಲಾಖೆಯ ತಂಡ ಶನಿವಾರ ಬಂಟ್ವಾಳ ತಾಲೂಕಿನಲ್ಲಿರುವ ವಿವಿಧೆಡೆಗಳಿಗೆ ಭೇಟಿ ನೀಡಿ ಕ್ವಾರಂಟೈನ್‌ನಲ್ಲಿರುವವರ ಕುರಿತು ಪರಿಶೀಲನೆ ನಡೆಸಿತು.

Advertisement

ಪುದು ಹಾಗೂ ಸಜೀಪಪಡು ಗ್ರಾಮ ಗಳಲ್ಲಿ ಹೋಂ ಕ್ವಾರಂಟೈನ್‌ನಲ್ಲಿರು ವವರ ಮನೆಯ ಬಳಿಗೆ ತೆರಳಿ ಅಲ್ಲಿನ ಸ್ಟಿಕ್ಕರಿಂಗ್‌ ಕುರಿತು ಪರಿಶೀಲಿಸಿತು. ಜತೆಗೆ ಮೊಗರ್ನಾಡುನಲ್ಲಿರುವ ಸರಕಾರಿ ಕ್ವಾರಂಟೈನ್‌ ವ್ಯವಸ್ಥೆಯ ಕುರಿತು ಪರಿಶೀಲಿಸಿತು.

ಅಪರ ಜಿಲ್ಲಾಧಿಕಾರಿ ರೂಪಾ ಎಂ.ಜೆ., ಮಂಗಳೂರು ಸಹಾಯಕ ಕಮಿಷನರ್‌ ಮದನ್‌ಮೋಹನ್‌ ಸಿ., ಬಂಟ್ವಾಳ ತಹಶೀಲ್ದಾರ್‌ ರಶ್ಮಿ ಎಸ್‌.ಆರ್‌., ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ನವೀನ್‌ಕುಮಾರ್‌ ಮೊದಲಾದವರಿದ್ದರು. ಪುದು ಗ್ರಾಮದ ಭೇಟಿಯ ಸಂದರ್ಭ ಸ್ಥಳೀಯ ಗ್ರಾ.ಪಂ. ಅಧ್ಯಕ್ಷ ರಮ್ಲಾನ್‌ ಮಾರಿ ಪಳ್ಳ, ಪಿಡಿಒ ಆನಂದ್‌, ವಿಎ ನವ್ಯಾ ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next