Advertisement

ಡ್ರಗ್ಸ್ ಜಾಲ: ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಮುಂಬಯಿ ಎನ್ ಸಿಬಿ ಬಲೆಗೆ

04:46 PM Jun 23, 2021 | Team Udayavani |

ಮುಂಬಯಿ: ಮುಂಬಯಿ ಸರಣಿ ಬಾಂಬ್ ಸ್ಫೋಟ ಪ್ರಕರಣದ ಮಾಸ್ಟರ್ ಮೈಂಡ್, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್ ನನ್ನು ಮುಂಬಯಿಯ ಮಾದಕ ವಸ್ತು ನಿಯಂತ್ರಣ ಬ್ಯೂರೋ(ಎನ್ ಸಿಬಿ) ವಶಕ್ಕೆ ಪಡೆದಿರುವುದಾಗಿ ತಿಳಿಸಿದೆ.

Advertisement

ಇದನ್ನೂ ಓದಿ:ಮಲ್ಯ, ನೀರವ್ ಮೋದಿ,ಚೋಕ್ಸಿಗೆ ಸಂಬಂಧಿಸಿದ 18,170.02 ಕೋಟಿ ಮೌಲ್ಯದ ಸ್ವತ್ತುಗಳ ಮುಟ್ಟುಗೋಲು!

ಎಎನ್ ಐ ಸುದ್ದಿ ಸಂಸ್ಥೆ ಪ್ರಕಾರ, ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್ ನನ್ನು ಡ್ರಗ್ಸ್ ಪ್ರಕರಣದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಎಸ್ ಸಿಬಿ ಖಚಿತಪಡಿಸಿರುವುದಾಗಿ ಹೇಳಿದೆ.

ಇಕ್ಬಾಲ್ ಕಸ್ಕರ್ ನನ್ನು ಈ ಸಂದರ್ಭದಲ್ಲಿ ಎನ್ ಸಿಬಿ ತೀವ್ರ ವಿಚಾರಣೆಗೆ ಗುರಿಪಡಿಸಿದೆ. ಈ ಹಿಂದೆ ಮುಂಬಯಿಯಲ್ಲಿ ಭೇದಿಸಿದ ಮಾದಕವಸ್ತು ಜಾಲ ಪ್ರಕರಣ ಮತ್ತು ಅಂತಾರಾಷ್ಟ್ರೀಯ ಸಂಪರ್ಕಗಳ ಬಗ್ಗೆ ಎನ್ ಸಿಬಿ ಸರಣಿಯಾಗಿ ತನಿಖೆಗೊಳಪಡಿಸಿದೆ ಎಂದು ವರದಿ ವಿವರಿಸಿದೆ.

ಕೆಲವು ನಂಬಲಾರದ ವರದಿಗಳ ಪ್ರಕಾರ, ಜಮ್ಮು-ಕಾಶ್ಮೀರದಿಂದ ಸುಮಾರು 25ಕೆ.ಜಿಯಷ್ಟು ಚರಸ್ ಅನ್ನು ತರುತ್ತಿದ್ದ ಇಕ್ಬಾಲ್ ಕಸ್ಕರ್ ನನ್ನು ಬಂಧಿಸಲಾಗಿದ್ದು, ಇಕ್ಬಾಲ್ ಚರಸ್ ಅನ್ನು ಮುಂಬಯಿಯಲ್ಲಿ ವಿತರಿಸುವ ಜಾಲ ಹೊಂದಿರುವುದಾಗಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next