Advertisement

ನೇತ್ರದಾನ ಘೋಷಿಸಿದ 100ಕ್ಕೂ ಹೆಚ್ಚು  ಜನ

04:04 PM Nov 10, 2021 | Team Udayavani |

ದಾವಣಗೆರೆ: ಅಭಿಮಾನ ಎಂದರೆ ಹೇಗಿರುತ್ತೆನೋಡಿ. ಅಕಾಲಿಕವಾಗಿ ನಿಧನರಾದ ಪವರ್‌ ಸ್ಟಾರ್‌ಪುನೀತ್‌ ರಾಜ್‌ಕುಮಾರ್‌ರವರ ನೇತ್ರದಾನದಿಂದಪ್ರೇರಣಗೊಂಡ 100ಕ್ಕೂ ಹೆಚ್ಚು ಜನರು ನೇತ್ರದಾನಕ್ಕೆಮುಂದಾಗುವ ಮೂಲಕ ಅಪ್ಪು ಮೇಲಿನ ಅಭಿಮಾನತೋರ್ಪಡಿಸಿ ಮಾದರಿಯಾಗಿದ್ದಾರೆ.

Advertisement

ದಾವಣಗೆರೆ ತಾಲೂಕಿನ ಚಟ್ಟೋಬನಹಳ್ಳಿಯಹಿರಿಯರು, ಮಹಿಳೆಯರು ಒಳಗೊಂಡಂತೆ 100ಕ್ಕೂಹೆಚ್ಚು ಜನರು ನೇತ್ರದಾನದಂತಹ ಶ್ರೇಷ್ಠ ದಾನಕ್ಕೆ ಒಪ್ಪಿಗೆಸೂಚಿಸಿದ್ದಾರೆ. ಆ ಮೂಲಕ ತಮ್ಮ ನೆಚ್ಚಿನ ನಟ ಪುನೀತ್‌ರಾಜ್‌ಕುಮಾರ್‌ ಸಾಗಿದ ದಾರಿಯಲ್ಲಿ ಹೆಜ್ಜೆ ಇಟ್ಟಿದ್ದಾರೆ.

ಜಿಲ್ಲಾ ಕೇಂದ್ರ ದಾವಣಗೆರೆಗೆ ಸಮೀಪದಲ್ಲಿರುವಚಟ್ಟೋಬನಹಳ್ಳಿಯಲ್ಲಿ 120-125 ಮನೆಗಳಿವೆ.ಮನೆಗೆ ಒಬ್ಬರಂತೆ ನೇತ್ರದಾನಕ್ಕೆ ಒಪ್ಪಿದ್ದಾರೆ. ಅದಕ್ಕೆಮೂಲ ಕಾರಣ ಪುನೀತ್‌ ರಾಜ್‌ಕುಮಾರ್‌. ತೀವ್ರಹೃದಯಾಘಾತದಿಂದ ಅಕಾಲಿಕ ಮರಣಕ್ಕೆ ತುತ್ತಾದಪುನೀತ್‌ ರಾಜ್‌ಕುಮಾರ್‌ ಅವರ ಕಣ್ಣುಗಳು ನಾಲ್ವರುಅಂಧರ ಬಾಳಲ್ಲಿ ಬೆಳಕು ತಂದಿದ್ದನ್ನು ತಿಳಿದ ಗ್ರಾಮದಅನೇಕರು ಪುನೀತ್‌ ರಾಜ್‌ಕುಮಾರ್‌ ಅವರಂತೆಯೇತಮ್ಮ ಕಣ್ಣುಗಳು ಬೇರೆಯವರಿಗೆ ಬೆಳಕಾಗಬೇಕು,ಅತ್ಯಮೂಲ್ಯ ಕಣ್ಣುಗಳು ಮಣ್ಣಲ್ಲಿ ಮಣ್ಣಾಗಿಹೋಗಬಾರದು ಎಂದು ತಮ್ಮ ಮರಣದ ನಂತರಕಣ್ಣುಗಳ ದಾನ ಮಾಡಲು ನಿರ್ಧರಿಸಿದ್ದಾರೆ.ನಮ್ಮ ಊರಿನ ಜನರಿಗೆ ಪುನೀತ್‌ ರಾಜ್‌ಕುಮಾರ್‌ ಎಂದರೆ ಪಂಚಪ್ರಾಣ.

ಪ್ರತಿಯೊಬ್ಬರೂಅವರ ಅಭಿಮಾನಿಗಳು. ಪುನೀತ್‌ ರಾಜ್‌ಕುಮಾರ್‌ನಿಧನರಾದ ದಿನವಂತೂ ಗ್ರಾಮದಲ್ಲಿ ಮೌನ ಕವಿದಿತ್ತು.ಅವರ ಸಾವನ್ನು ಈ ಕ್ಷಣಕ್ಕೂ ಅರಗಿಸಿಕೊಳ್ಳಲಾರದವರುಅನೇಕರು ಇದ್ದಾರೆ ಎಂದು ಎಸ್‌ಬಿಐ ಉದ್ಯೋಗಿಯೂಆಗಿರುವ ಎಸ್‌. ಅಣ್ಣಪ್ಪ ತಿಳಿಸಿದರು.

ಪುನೀತ್‌ ರಾಜ್‌ಕುಮಾರ್‌ರವರ ನಿಧನದ ನಂತರಅವರು ನೇತ್ರದಾನ ಮಾಡಿದ್ದು, ಅವರ ಕಣ್ಣುಗಳನ್ನಪಡೆದು ಇತರೆ ನಾಲ್ವರಿಗೆ ಜೋಡಣೆ ಮಾಡಿದ್ದು,ಅವರು ಪ್ರಪಂಚವನ್ನೆಲ್ಲ ನೋಡುವಂತಾಗಿದ್ದುಗ್ರಾಮಸ್ಥರ ಮೇಲೆ ಭಾರೀ ಪರಿಣಾಮ ಉಂಟುಮಾಡಿತು.

Advertisement

ತಮ್ಮ ನೆಚ್ಚಿನ ನಟನಂತೆ ನಾವೂ ಕಣ್ಣುಗಳದಾನ ಮಾಡಬೇಕು, ನಾವು ಸತ್ತ ನಂತರವೂ ಇತರರಿಗೆಬೆಳಕಾಗಬೇಕು. ಮರಣದ ನಂತರವೂ ಪ್ರಪಂಚನೋಡುವಂತಾಗಬೇಕು. ಹಾಗಾಗಿ ಕಣ್ಣುಗಳದಾನ ಮಾಡಬೇಕು ಎಂದು ಗೆಳೆಯರು ವಿಷಯಪ್ರಸ್ತಾಪಿಸಿದರು. ಸಭೆ ನಡೆಸಿ ನೇತ್ರದಾನದ ಮಹತ್ವಮನವರಿಕೆ ಮಾಡಿದಾಗ 100ಕ್ಕೂ ಹೆಚ್ಚು ಜನರುಒಪ್ಪಿಕೊಂಡಿದ್ದಾರೆ. ನ. 6 ರಂದು ಗ್ರಾಮದಲ್ಲಿ ಕನ್ನಡರಾಜ್ಯೋತ್ಸವ, ಶ್ರೀ ಸೇವಾಲಾಲ್‌ ಸಂಘದ ಉದ್ಘಾಟನೆಜೊತೆಗೆ ನೇತ್ರದಾನ ಶಿಬಿರವನ್ನೂ ಕೈ ಗೊಳ್ಳಲಾಗಿತ್ತು.

ಆಸಂದರ್ಭದಲ್ಲಿ 100ಕ್ಕೂ ಹೆಚ್ಚು ಜನರು ನೇತ್ರದಾನದನಿರ್ಧಾರ ಪ್ರಕಟಿಸಿದರು ಎಂದು ಮಾಹಿತಿ ನೀಡಿದರು.45 ವರ್ಷ ಮೇಲ್ಪಟ್ಟಿರುವ ಎಲ್‌. ತಿಪ್ಪೇಶ್‌ ನಾಯ್ಕ,ಮಲ್ಲೇಶ್‌ ನಾಯ್ಕ, ರುದ್ರಾ ನಾಯ್ಕ ಸೇರಿದಂತೆನಾಲ್ವರು ಕಣ್ಣುಗಳ ದಾನಕ್ಕೆ ಒಪ್ಪಿದ್ದಾರೆ. 18 ರಿಂದ 45ವರ್ಷದೊಳಗಿನವರು ಸೇರಿಕೊಂಡು 100 ಜನರುನೇತ್ರದಾನ ಮಾಡುತ್ತಿದ್ದಾರೆ. ನನ್ನ ಜೊತೆಗೆ ನನ್ನ ತಮ್ಮಅನಿಲ್‌ ನಾಯ್ಕ ಸಹ ಕಣ್ಣು ದಾನ ಮಾಡುತ್ತಿದ್ದೇವೆಎಂದು ತಿಳಿಸಿದರು.

ನೇತ್ರದಾನಕ್ಕೆ ಸಂಬಂಧಿಸಿದಂತೆ ದಾವಣಗೆರೆಯಬಾಪೂಜಿ ಆಸ್ಪತ್ರೆಯವರನ್ನು ಸಂಪರ್ಕಿಸಿದ್ದೇವೆ. ಇನ್ನುಎರಡು ದಿನಗಳಲ್ಲಿ ಅರ್ಜಿ ಭರ್ತಿ ಮಾಡಿ ಮುಂದಿನಪ್ರಕ್ರಿಯೆ ಕೈಗೊಳ್ಳಲಾಗುವುದು. ನೇತ್ರದಾನಕ್ಕೆಒಪ್ಪಿರುವವರ ಎಲ್ಲ ಕುಟುಂಬದವರಿಗೆ ಮಾಹಿತಿನೀಡುವ ಜೊತೆಗೆ ಮುಂದೆ ಮಾಡಬೇಕಾದಂತಹಕೆಲಸಗಳ ಬಗ್ಗೆಯೂ ತಿಳಿಸಲಾಗಿದೆ ಎಂದು ಅಣ್ಣಪ್ಪಹೇಳಿದರು.

ಒಬ್ಬ ನಾಯಕ ನಟ ಸಾಗುವ ಹಾದಿ, ಮಾಡುವಂತಹಸಾಮಾಜಿಕ ಸೇವಾ ಕಾರ್ಯಗಳು ಅವರ ಅಭಿಮಾನಿಗಳಮೇಲೆ ಎಂತಹ ಪ್ರಭಾವ, ಪರಿಣಾಮ ಬೀರಬಲ್ಲವು.ಏನೆಲ್ಲ ಸಾಧನೆ ಸಾಧ್ಯ ಎಂಬುದಕ್ಕೆ ಪವರ್‌ ಸ್ಟಾರ್‌ ಪುನೀತ್‌ರಾಜ್‌ಕುಮಾರ್‌ ಹಾಗೂ ಚಟ್ಟೋಬನಹಳ್ಳಿ ಗ್ರಾಮಸ್ಥರೇಸಾಕ್ಷಿ ಎಂದರೆ ಅತಿಶಯೋಕ್ತಿಯಾಗಲಾರದು.
ರಾ. ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next