Advertisement

Davanagere; ಸಾಲ ಮರುಪಾವತಿ ವಿಚಾರಕ್ಕೆ ಗಲಾಟೆ: ಕಟ್ಟಿಗೆಯಿಂದ ತಲೆಗೆ ಹೊಡೆದು ಕೊಲೆ

07:00 PM Aug 08, 2023 | Team Udayavani |

ದಾವಣಗೆರೆ: ಹಣಕಾಸು ವಿಚಾರದ ಗಲಾಟೆ ಸಂಬಂಧ ಜೈಲಿಗೆ ಹೋಗಿ ಬಂದ ನಂತರ ಕಿರುಕುಳ ನೀಡುತ್ತಿದ್ದವನನ್ನು ಕೊಲೆ ಮಾಡಿದ ಘಟನೆ ಸೋಮವಾರ ತಡರಾತ್ರಿ ದಾವಣಗೆರೆ ತಾಲೂಕಿನ ಮಲ್ಲಶೆಟ್ಟಿಹಳ್ಳಿ ಕ್ರಾಸ್ ಬಳಿ ನಡೆದಿದೆ.

Advertisement

ದಾವಣಗೆರೆ ಹೊರ ವಲಯದ ರಾಮನಗರದ ನಿವಾಸಿ ನರಸಿಂಹ (26) ಕೊಲೆಯಾದವನು. ಅದೇ ರಾಮನಗರದ ನಿವಾಸಿ ಶಿವಯೋಗೇಶ್ ಕೊಲೆ ಮಾಡಿರುವ ಆರೋಪಿ.

ಮೇಸ್ತ್ರಿ ಆಗಿದ್ದ ಶಿವಯೋಗೇಶ್ ಮತ್ತು ಕೊಲೆಗೀಡಾಗಿರುವ ನರಸಿಂಹನ ನಡುವೆ ಹಣಕಾಸು ವ್ಯವಹಾರ ಇತ್ತು. ಸಾಲ ಪಡೆದಿದ್ದ ನರಸಿಂಹ ವಾಪಸ್ ನೀಡರಲಿಲ್ಲ. ಶಿವಯೋಗೇಶ್ ಹಣ ಕೇಳುತ್ತಿದ್ದ ಕಾರಣಕ್ಕೆ ನರಸಿಂಹನು ಶಿವಯೋಗೇಶ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಕೆಲ ದಿನಗಳ ಕಾಲ ಜೈಲು ಶಿಕ್ಷೆಗೆ ಒಳಗಾಗಿದ್ದನು.

ಇದನ್ನೂ ಓದಿ:Bhadravathi ಕಾಲೇಜಿನಲ್ಲಿ ಪ್ರಕಾಶ್ ರಾಜ್ ಸಂವಾದ: ವಿದ್ಯಾರ್ಥಿಗಳಿಂದ ಭಾರೀ ಪ್ರತಿಭಟನೆ

ಜೈಲಿನಿಂದ ಹೊರ ಬಂದ ಮೇಲೆ ನರಸಿಂಹ ಬೆದರಿಕೆ ಹಾಕುವುದನ್ನು ಮುಂದುವರಿಸಿದ್ದರಿಂದ ರೋಸಿ ಹೋಗಿದ್ದ ಶಿವಯೋಗೇಶ್ ಸೋಮವಾರ ರಾತ್ರಿ ಮಾತುಕತೆ ನಡೆಸುವ ನೆಪದಲ್ಲಿ ಮಲ್ಲಶೆಟ್ಟಿಹಳ್ಳಿ ಕ್ರಾಸ್ ಬಳಿಗೆ ಕರೆಸಿ ಕೊಂಡಿದ್ದ. ಮಾತಿಗೆ ಮಾತು ಬೆಳೆದು ಶಿವಯೋಗೇಶ್ ಕಟ್ಟಿಗೆಯಿಂದ ತಲೆಗೆ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ನರಸಿಂಹ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

Advertisement

ಪ್ರಕರಣ ದಾಖಲಿಸಿಕೊಂಡ ದಾವಣಗೆರೆ ಗ್ರಾಮಾಂತರ ಪೊಲೀಸರು ಶಿವಯೋಗೇಶ್‌ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next