Advertisement

ದಾವಣಗೆರೆ ಜಿಲ್ಲೆಯಲ್ಲಿ 853 ಸೋಂಕಿತರು ಗುಣಮುಖ : 698 ಹೊಸ ಪ್ರಕರಣ

09:31 PM May 30, 2021 | Team Udayavani |

ದಾವಣಗೆರೆ: ಜಿಲ್ಲೆಯಲ್ಲಿ ಭಾನುವಾರ ಕೊರೊನಾದಿಂದ ಗುಣಮುಖರಾದ 853 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

Advertisement

ದಾವಣಗೆರೆ ನಗರ ಮತ್ತು ತಾಲೂಕಿನ ಇತರೆ ಭಾಗದ 342, ಹರಿಹರದಲ್ಲಿ 124, ಜಗಳೂರಿನಲ್ಲಿ 61, ಚನ್ನಗಿರಿ ಯಲ್ಲಿ 148, ಹೊನ್ನಾಳಿಯಲ್ಲಿ 161 ಹಾಗೂ ಹೊರ ಜಿಲ್ಲೆಯ 17 ಜನ ಒಳಗೊಂಡಂತೆ 853 ಸೋಂಕಿತರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಮತ್ತೊಮ್ಮೆ ಸೋಂಕಿತರ ಸಂಖ್ಯೆಗಿಂತಲೂ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ.

ದಾವಣಗೆರೆ ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ 338 ಪ್ರಕರಣ ಪತ್ತೆಯಾಗಿವೆ. ಹರಿಹರದಲ್ಲಿ 72 , ಜಗಳೂರಿನಲ್ಲಿ 38, ಚನ್ನಗಿರಿಯಲ್ಲಿ137, ಹೊನ್ನಾಳಿಯಲ್ಲಿ 100 ಹಾಗೂ ಹೊರ ಜಿಲ್ಲೆಯ 13 ಜನರು ಒಳಗೊಂಡಂತೆ 698 ಜನರಲ್ಲಿ ಮಹಾಮಾರಿ ಕೊರೊನಾ ಪತ್ತೆಯಾಗಿದೆ.

ಇದನ್ನೂ ಓದಿ :ಸುಲಿಗೆ ಮಾಡುವ ಆ್ಯಂಬುಲೆನ್ಸ್ ಚಾಲಕರ ವಿರುದ್ಧ ಕಠಿಣ ಕ್ರಮ: ಆರ್ ಅಶೋಕ್

ಕಳೆದ ವರ್ಷ ಕೊರೊನಾ ಪ್ರಾರಂಭದಿಂದ ದಾವಣಗೆರೆ ತಾಲೂಕಿನಲ್ಲಿ 22788, ಹರಿಹರದಲ್ಲಿ 5839, ಜಗಳೂರಿನಲ್ಲಿ 2232, ಚನ್ನಗಿರಿಯಲ್ಲಿ4798, ಹೊನ್ನಾಳಿಯಲ್ಲಿ 5151, ಹೊರ ಜಿಲ್ಲೆಯ 1226 ಜನರು ಸೇರಿದಂತೆ ಈವರೆಗೆ ಒಟ್ಟು 42,034 ಜನರು ಸೋಂಕಿಗೆ ಒಳಗಾಗಿದ್ದಾರೆ.

Advertisement

ಕೊರೊನಾದಿಂದ ಈವರೆಗೆ ದಾವಣಗೆರೆ ತಾಲೂಕಿನಲ್ಲಿ 20537, ಹರಿಹರದಲ್ಲಿ5176, ಜಗಳೂರಿನಲ್ಲಿ 1882, ಚನ್ನಗಿರಿಯಲ್ಲಿ 3892, ಹೊನ್ನಾಳಿಯಲ್ಲಿ 4415, ಹೊರ ಜಿಲ್ಲೆಯ 1142 ಜನರು ಸೇರಿದಂತೆ 36,906 ಸೋಂಕಿತರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 4773ಸಕ್ರಿಯ ಪ್ರಕರಣಗಳಿವೆ.

ಜಿಲ್ಲೆಯಲ್ಲಿ ಕೊರೊನಾದಿಂದ ಎಂಟು ಜನರು ಮೃತಪಟ್ಟಿದ್ದಾರೆ. ದಾವಣಗೆರೆ ಸಮೀಪದ ಮಾಗಾನಹಳ್ಳಿಯ 30 ವರ್ಷದ ವ್ಯಕ್ತಿ, ಜಗಳೂರುನ ಗೊಲ್ಲರಹಟ್ಟಿಯ 70 ವರ್ಷದ ವೃದ್ಧ, ಹರಿಹರ ತಾಲೂಕಿನ ಭಾನುವಳ್ಳಿಯ 40 ವರ್ಷದ ವ್ಯಕ್ತಿ, ಹೊನ್ನಾಳಿ ತಾಲೂಕಿನ ಮುಕ್ತೇನಹಳ್ಳಿಯ 48 ವರ್ಷದ ಮಹಿಳೆ, ಹೊನ್ನಾಳಿ ತಾಲೂಕಿನ ಕೂಲಂಬಿ ಗ್ರಾಮದ 60 ವರ್ಷದ ವೃದ್ಧ, ಹೊನ್ನಾಳಿ ತಾಲೂಕಿನ ಬೆನಕನಹಳ್ಳಿ ಗ್ರಾಮದ 42 ವರ್ಷದ ವ್ಯಕ್ತಿ, ಯಕ್ಕನಹಳ್ಳಿಯ 80 ವರ್ಷದ ವೃದ್ಧ, ಹತ್ತೂರು ಗ್ರಾಮದ 40 ವರ್ಷದ ವ್ಯಕ್ತಿ ಮೃತಪಟ್ಟವರು. ಈವರೆಗೆ ಕೊರೊನಾದಿಂದ ಜಿಲ್ಲೆಯಲ್ಲಿ 355 ಜನರು ಸಾವನ್ನಪ್ಪಿದ್ದಂತಾಗಿದೆ.

ಜಿಲ್ಲೆಯ ವಿವಿಧ ಆಸ್ಪತ್ರೆಯಲ್ಲಿ 248 ಸೋಂಕಿತರು ಸಾಮಾನ್ಯ, 720 ಸೋಂಕಿತರು ಆಕ್ಸಿಜನ್, 30 ಸೋಂಕಿತರು ಎಚ್‌ಎಫ್‌ಎನ್‌ಸಿ, 52 ಸೋಂಕಿತರು ವೆಂಟಿಲೇಟರ್ 34 ಸೋಂಕಿತರು ವೆಂಟಿಲೇಟರ್ ರಹಿತ, 2571 ಸೋಂಕಿತರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. 1281ಸೋಂಕಿತರು ಕೋವಿಡ್ ಕೇರ್ ಸೆಂಟರ್‌ನಲ್ಲಿ ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next