Advertisement

ಲೋಕ ಕಲ್ಯಾಣಾರ್ಥ ಮೃತ್ಯುಂಜಯ-ಧನ್ವಂತರಿ ಹೋಮ

06:03 PM Jul 20, 2021 | Team Udayavani |

ಹೊನ್ನಾಳಿ: ಲೋಕ ಕಲ್ಯಾಣಾರ್ಥ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರ ಆರೋಗ್ಯ ವೃದ್ಧಿಗೆ ಪ್ರಾರ್ಥಿಸಿ ರೇಣುಕಾಚಾರ್ಯ ಜನಸೇವಾ ಟ್ರಸ್ಟ್‌ ವತಿಯಿಂದ ಇಲ್ಲಿನ ಹಿರೇಕಲ್ಮಠದಲ್ಲಿ ಸೋಮವಾರ ಮೃತ್ಯುಂಜಯ ಹಾಗೂ ಧನ್ವಂತರಿ ಹೋಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಶಾಸಕ ಎಂ.ಪಿ. ರೇಣುಕಾಚಾರ್ಯ, ಜನರ ಆರೋಗ್ಯ ಸುಧಾರಣೆಗೆ ಪ್ರಾರ್ಥಿಸಿ ಹೋಮ ಮಾಡಲಾಗಿದೆ.

Advertisement

ಈಗಾಗಲೇ ಕೊರೊನಾ ಎರಡನೇ ಅಲೆ ಕಡಿಮೆಯಾಗಿ¨ದ್ದು, ಮೂರನೇ ಅಲೆ ಬರುತ್ತದೆಂದು ತಜ್ಞರು ಹೇಳುತ್ತಿದ್ದಾರೆ. ಮೂರನೇ ಅಲೆ ಬರಬಾರದೆಂದು ದೇವರಲ್ಲಿ ಪ್ರಾರ್ಥಿಸಿದ್ದಾಗಿ ತಿಳಿಸಿದರು. ಧನ್ವಂತರಿ ಹೋಮ ಮಾಡುವುದರಿಂದ ಪರಿಸರ ಶುದ್ಧಿಯಾಗಿ ವೈರಸ್‌ ನಿವಾರಣೆಯಾಗುತ್ತದೆ ಎಂಬ ಪ್ರತೀತಿ ಇದೆ. ಅದರ ಜೊತೆಗೆ ಮೃತ್ಯುಂಜಯ ಹೋಮ ಮಾಡುವುದರಿಂದ ಅಪಮೃತ್ಯುವನ್ನು ತಡೆಯಲು ಈ ಎರಡು ಹೋಮ ಮಾಡಿದ್ದೇವೆ.

ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಲೋಕಕ್ಕೆ ಒಳಿತಾಗಲಿ ಎಂದು ಹೋಮ ಮಾಡಿದ್ದಕ್ಕೆ ವಿಪಕ್ಷದವರು ಅಪಪ್ರಚಾರ ಮಾಡಿದ್ದರು. ಎಲ್ಲರೂ ಗುಣಮುಖರಾದ ಮೇಲೆ ಮಠದಲ್ಲಿ ಹೋಮ ಮಾಡುವಂತೆ ಸಲಹೆ ನೀಡಿದ್ದೆ ಎಂದರು.

ಡಾ| ಒಡೆಯರ್‌ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜನಸೇವಾ ಟ್ರಸ್ಟ್‌ ಗೌರವಾಧ್ಯಕ್ಷ ಚೀಲೂರು ಲೋಕೇಶ್‌, ಅಧ್ಯಕ್ಷ ಕೋಟೆಮಲ್ಲೂರು ಮನೋಜ್‌, ಉಪಾಧ್ಯಕ್ಷ ಮಂಜುನಾಥ್‌, ಕಾರ್ಯದರ್ಶಿ ಬೀರೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next