Advertisement

ಪಿಯು-ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿ ಜೊತೆ ಇಂದು ದತ್ತ ಮಾತು

08:53 AM Jun 14, 2020 | Suhan S |

ಚಿಕ್ಕಮಗಳೂರು: ಪಿಯು ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾಜಿ ಶಾಸಕ ವೈ.ಎಸ್‌ವಿ.ದತ್ತ ಅವರು ಪರೀಕ್ಷೆಯ ಭಯ ನಿವಾರಿಸುವ ಸಲುವಾಗಿ ಭಾನುವಾರ ಬೆಳಗ್ಗೆ 11 ಗಂಟೆಗೆ ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಲಿದ್ದಾರೆ.

Advertisement

“ಕನಸುಗಳ ಇನಿ ನಿಟಿ’ ಎನ್ನುವ ಸ್ಫೂರ್ತಿದಾಯಕ ಫೇಸ್‌ ಬುಕ್‌ ಪುಟ, ಸಾಹಿತ್ಯ ಸಂಸ್ಕೃತಿ, ಕಲೆಗಳ ಕುರಿತು ನಿರಂತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ. ಅನಿಶ್ಚಿತವಾಗಿ ತಂದೊಡ್ಡಿದ್ದ ಲಾಕ್‌ಡೌನ್‌ ಮಕ್ಕಳು ಮತ್ತು ಯುವಕರನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡಿದೆ. ಜೊತೆಗೆ ಪರೀಕ್ಷೆಯನ್ನು ಎದುರಿಸಬೇಕಾದ ಕಾರಣ ಅವರಲ್ಲಿ ಆತ್ಮಸ್ಥೈರ್ಯ ತುಂಬವ ಕೆಲಸ ನಡೆಯಬೇಕಿದೆ. ಆ ದಿಸೆಯಲ್ಲಿ ದತ್ತ ಅವರು, ರಾಜ್ಯದ ಎಲ್ಲ ವಿದ್ಯಾರ್ಥಿಗಳನ್ನು ಹಾಗೂ ಯುವಕರನ್ನು ಉದ್ದೇಶಿಸಿ ಫೇಸ್‌ಬುಕ್‌ ಲೈವ್‌ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ ಎಂದು ಕನಸುಗಳ ಇನಿ ನಿಟಿ ಕಾರ್ಯನಿರ್ವಾಹಕಿ ಅಜ್ಜಂಪುರ ಎಸ್‌.ಶೃತಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next