Advertisement

ಭಾರತದಲ್ಲೇ ಡೇಟಾ ಸಂಗ್ರಹ?

10:32 AM Jun 19, 2018 | Team Udayavani |

ಹೊಸದಿಲ್ಲಿ: ಡೇಟಾ ರಕ್ಷಣೆಗೆ ಸಂಬಂಧಿಸಿ ನೀತಿ ನಿರೂಪಣೆಗೆ ಸಲಹೆ ನೀಡಲು ನಿಯೋಜಿಸಲಾಗಿರುವ ಕರ್ನಾಟಕ ಮೂಲದ ನಿವೃತ್ತ ನ್ಯಾಯಮೂರ್ತಿ ಬಿ.ಎನ್‌. ಶ್ರೀಕೃಷ್ಣ  ಸಮಿತಿ ಮಾಸಾಂತ್ಯಕ್ಕೆ ವರದಿ ನೀಡಲಿದ್ದು, ಬಹುರಾಷ್ಟ್ರೀಯ ಕಂಪೆನಿಗಳು ಭಾರತದಲ್ಲೇ ಭಾರತೀಯರ ಡೇಟಾವನ್ನು ಸಂಗ್ರಹಿಸಬೇಕು ಎಂಬುದಾಗಿ ವರದಿ ನೀಡುವ ಸಾಧ್ಯತೆಯಿದೆ.
ಗೂಗಲ್‌, ಫೇಸ್‌ಬುಕ್‌ ಹಾಗೂ ಇತರ ತಂತ್ರಜ್ಞಾನ ಕಂಪನಿಗಳು ಸದ್ಯ ವಿದೇಶದಲ್ಲೇ ಹೆಚ್ಚಿನ ಸರ್ವರ್‌ಗಳನ್ನು ಹೊಂದಿದ್ದು, ಭಾರತದಲ್ಲಿ ಡೇಟಾ ಸಂಗ್ರಹಿಸುವುದಿಲ್ಲ.

Advertisement

10 ಸದಸ್ಯರನ್ನು ಒಳಗೊಂಡ ಸಮಿತಿಯಲ್ಲಿ ಬಹುತೇಕ ಸದಸ್ಯರು ಭಾರತದಲ್ಲೇ ಡೇಟಾ ಸಂಗ್ರಹಿಸುವ ಪ್ರಸ್ತಾವನೆಗೆ ಒಲವು ಹೊಂದಿದ್ದಾರೆ. ಇದು ಭಾರತೀಯರ ದತ್ತಾಂಶ ಭದ್ರತೆಗೆ ಅತ್ಯಂತ ಮಹತ್ವದ್ದಾಗಿದೆ. ಸೋಮವಾರ  ಈ ಸಂಬಂಧ ಸಮಿತಿ ಸಭೆ ನಡೆಸಿದ್ದು, ಅಂತಿಮ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next