Advertisement

ಮಗನಿಗೆ ದರ್ಶನ್‌ ಹೈನುಗಾರಿಕೆ ಪಾಠ

10:57 AM May 01, 2019 | Lakshmi GovindaRaju |

ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಮಂಡ್ಯದಲ್ಲಿ ಹಸುವಿನ ಹಾಲು ಕರೆದು, ತಾನು ರೈತ ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದ ದರ್ಶನ್‌, ಈಗ ತಮ್ಮ ಮಗನಿಗೂ ಹಾಲು ಕರೆಯೋದನ್ನು ಹೇಳಿಕೊಡುತ್ತಿದ್ದಾರೆ.

Advertisement

ಈ ಮೂಲಕ ಮಗನಿಗೂ ಕೃಷಿ ಸೇರಿದಂತೆ ರೈತಾಪಿ ಕೆಲಸಗಳ ಬಗ್ಗೆ ಆಸಕ್ತಿ ಮೂಡಿಸುತ್ತಿದ್ದಾರೆ. ಮೈಸೂರಿನ ತಮ್ಮ ಫಾರ್ಮ್ಹೌಸ್‌ನಲ್ಲಿ ದರ್ಶನ್‌, ಹಾಲು ಕರೆದು ತೋರಿಸುವ ಮೂಲಕ, ಮಗ ವಿನೀಶ್‌ಗೆ ಅದರ ತರಬೇತಿ ನೀಡುತ್ತಿದ್ದಾರೆ.

ದರ್ಶನ್‌ ಅಭಿಮಾನಿಗಳು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದು, ಅದು ಸಖತ್‌ ವೈರಲ್‌ ಆಗಿದೆ. ಜೊತೆಗೆ ಅಭಿಮಾನಿಗಳು ಖುಷಿಯಿಂದ ಕಾಮೆಂಟ್‌ ಮಾಡಿದ್ದಾರೆ.

ಸದ್ಯ ದರ್ಶನ್‌ ಬಿಡುವಿನಲ್ಲಿದ್ದು, ಅವರ ಹೊಸ ಚಿತ್ರ “ರಾಬರ್ಟ್‌’ ಮೇ 16 ರಿಂದ ಚಿತ್ರೀಕರಣ ಆರಂಭವಾಗಲಿದೆ. ಈ ಚಿತ್ರವನ್ನು ತರುಣ್‌ ಸುಧೀರ್‌ ನಿರ್ದೇಶಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next