Advertisement

3 ಸಾವಿರ ಹಾವು ರಕ್ಷಿಸಿದ ಡ್ಯಾನಿಗೆ ಕಚ್ಚಿದ ಹಾವು !

01:28 PM Jun 25, 2020 | Suhan S |

ಬಾಗಲಕೋಟೆ: ನಗರದಲ್ಲಿ ಹಲವು ಸಾಮಾಜಿಕ ಸೇವೆ, ಹೋರಾಟದ ಮೂಲಕ ಗಮನ ಸೆಳೆದ ಡ್ಯಾನಿಯಲ್‌ ನ್ಯೂಟನ್‌ಗೆ ಬುಧವಾರ ಮಧ್ಯಾಹ್ನ ಹಾವು ಕಚ್ಚಿದ್ದು, ತೀವ್ರ ಅಸ್ವಸ್ಥಗೊಂಡಿದ್ದಾರೆ.

Advertisement

ಕಳೆದ ಹಲವು ವರ್ಷಗಳಿಂದ ನಗರ, ಗ್ರಾಮೀಣ ಭಾಗದಲ್ಲಿ ಹಾವುಗಳನ್ನು ರಕ್ಷಿಸಿ, ಕಾಡಿಗೆ ಬಿಡುವ ಕಾರ್ಯದಲ್ಲಿ ತೊಡಗಿದ್ದ ಡ್ಯಾನಿಯಲ್‌ ಅವರಿಗೆ ಈವರೆಗೆ ಒಟ್ಟು 67 ಬಾರಿ ಹಾವು ಕಚ್ಚಿದ್ದರೂ ಯಾವುದೇ ಸಮಸ್ಯೆ ಆಗಿರಲಿಲ್ಲ. ಆದರೆ, ಬುಧವಾರ ಮನೆಯೊಂದರ ಬಳಿ ಬಂದಿದ್ದ ಮಿಡಿ ನಾಗರಹಾವು ಹಿಡಿದು ಕಾಡಿಗೆ ಬಿಡಲು ತಯಾರಿಯಾಗಿದ್ದರು. ಹಾವು ಹಿಡಿದ ಬಳಿಕ ಮನೆಗೆ ಹೋಗಿ ಇಟ್ಟಿದ್ದರು. ಈ ವೇಳೆ, ಹಾವು ಕಚ್ಚಿದ್ದು, ತೀವ್ರ ಅಸ್ವಸ್ಥಗೊಂಡಿದ್ದರು. ಬಳಿಕ ಅವರ ಸ್ನೇಹಿತರು, ಮನೆಯವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಡ್ಯಾನಿಯಲ್‌ ನ್ಯೂಟನ್‌ ಅವರು, ಅತ್ಯಂತ ಅಪಾಯಕಾರಿ ಸ್ಥಳಗಳಲ್ಲಿ ಹಾವುಗಳಿದ್ದರೂ ಅವುಗಳನ್ನು ರಕ್ಷಿಸಿ ಕಾಡಿಗೆ ಬಿಡುತ್ತಿದ್ದರು. ಇಲ್ಲಿಯ ವರೆಗೆ 3031 ಹಾವು ರಕ್ಷಣೆ ಮಾಡಿದ್ದಾರೆ.

ಅದರಲ್ಲಿ 997 ನಾಗರಹಾವು ಹಿಡಿದಿದ್ದರು. ಒಟ್ಟಾರೆ 67 ಬಾರಿ ಹಾವು ಕಚ್ಚಿತ್ತು. ಹಾವುಗಳ ರಕ್ಷಣೆಯಲ್ಲಿ ಅರಣ್ಯ ಇಲಾಖೆ ತೀವ್ರ ನಿರ್ಲಕ್ಷ್ಯ ವಹಿಸಿದ್ದಾಗ, ತಾವು ಹಿಡಿದ ಹಾವುಗಳನ್ನೇ ಅರಣ್ಯ ಇಲಾಖೆ ಕಚೇರಿಯ ಬಾಗಿಲ ಬಳಿ ಬಿಟ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next