Advertisement

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

10:46 AM Mar 19, 2024 | Team Udayavani |

ದಾಂಡೇಲಿ: ನಗರದ ಕಾಗದ ಕಾರ್ಖಾನೆಯೊಂದರ ಚಿಪ್ಪರ್ ಹೌಸ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕನೋರ್ವರು ಯಂತ್ರದಡಿ ಸಿಲುಕಿ ಗಂಭೀರ ಗಾಯಗೊಂಡ ಘಟನೆ ನಡೆದಿದೆ.

Advertisement

ಸ್ಥಳೀಯ ನಿರ್ಮಲನಗರದ‌ ನಿವಾಸಿ ಶ್ರೀಕಾಂತ ಲಕ್ಷ್ಮಣ ಹರಿಜನ (35) ಗಂಭೀರ ಗಾಯಗೊಂಡು ಕಾಲು ಕಳೆದಕೊಂಡ ಕಾರ್ಮಿಕ.

ಗಂಭೀರ ಗಾಯಗೊಂಡ ಇವರು ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಯಂತ್ರದಡಿ ಸಿಲುಕಿದ ಶ್ರೀಕಾಂತ ಅವರ ಎರಡು ಕಾಲುಗಳಿಗೆ ಗಂಭೀರ ಗಾಯವಾಗಿದೆ. ಅದರಲ್ಲಿ ಒಂದು ಕಾಲನ್ನು ಕಳೆದುಕೊ‌ಡಿದ್ದು, ಇನ್ನೊಂದು ಕಾಲನ್ನು ಉಳಿಸಿಕೊಳ್ಳಲು ಶಸ್ತ್ರಚಿಕಿತ್ಸೆ ಮಾಡುವ ತಯಾರಿ ನಡೆಯುತ್ತಿದೆ.

ಎರಡು ವರ್ಷದ ಸಣ್ಣ ಮಗುವನ್ನು ಹೊಂದಿರುವ ಶ್ರೀಕಾಂತ ಅವರದ್ದು ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವ ಕುಟುಂಬವಾಗಿದೆ. ಇಡೀ ಕುಟುಂಬಕ್ಕೆ ಆದರ ಸ್ತಂಭವಾಗಿದ್ದ ಅವರು ಇದೀಗ ಆಸ್ಪತ್ರೆಯಲ್ಲಿರುವುದರಿಂದ ಅವರ ಕುಟುಂಬ ಕಣ್ಣೀರಿನಲ್ಲಿ ಬದುಕುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next