Advertisement

ಚಾರ್ಮಾಡಿ ಹಳ್ಳ ಸೇತುವೆ ತಡೆಗೋಡೆಗೆ ಹಾನಿ

10:36 AM Jul 01, 2018 | Team Udayavani |

ಬೆಳ್ತಂಗಡಿ : ಬಿ.ಸಿ. ರೋಡ್‌- ಚಾರ್ಮಾಡಿ ಹೆದ್ದಾರಿಯ ಚಾರ್ಮಾಡಿ ಹಳ್ಳದಲ್ಲಿ ಕಿರುಸೇತುವೆಯೊಂದಿದ್ದು, ಕಳೆದ ಕೆಲವು ದಿನಗಳ ಹಿಂದೆ ರಾತ್ರಿವೇಳೆ ಯಾವುದೋ ವಾಹನ ಸೇತುವೆಯ ಕಬ್ಬಿಣದ ತಡೆಗೆ ಢಿಕ್ಕಿ ಹೊಡೆದು ಅಪಾಯದ ಸ್ಥಿತಿ ನಿರ್ಮಾಣವಾಗಿದೆ. ಪ್ರಸ್ತುತ ಹೆದ್ದಾರಿ ಇಲಾಖೆಯು ಈ ಭಾಗದಲ್ಲಿ ಬ್ಯಾರಿಕೇಡ್‌ ಇಟ್ಟು, ಅಪಾಯವನ್ನು ಸೂಚಿಸುವ ರೀತಿಯಲ್ಲಿ ಪ್ಲಾಸ್ಟಿಕ್‌ ರಿಬ್ಬನನ್ನು ಕಟ್ಟಿದೆ. ಆದರೂ ವಾಹನಗಳು ಸೇತುವೆಯ ಬದಿಗೆ ಬಂದದ್ದೇ ಆದಲ್ಲಿ ಅಪಾಯದ ಸಾಧ್ಯತೆ ಹೆಚ್ಚಿದೆ. ಈ ಹಿಂದೆಯೂ ಇಲ್ಲಿ ಹತ್ತಿರದ ತೋಡಿಗೆ ವಾಹನ ಬಿದ್ದ ಘಟನೆ ಸಂಭವಿಸಿತ್ತು. 

Advertisement

ಶಿರಾಡಿ ಘಾಟಿ ರಸ್ತೆ ಮುಚ್ಚಿರುವ ಪರಿಣಾಮ ಹಾಸನ-ಬೆಂಗಳೂರು ಕಡೆಗೆ ಸಾಗುವ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತವೆ. ಹೀಗಾಗಿ ಹೆದ್ದಾರಿಯಲ್ಲಿ ವಾಹನಗಳ ಒತ್ತಡ ಹೆಚ್ಚಿದ್ದು, ರಸ್ತೆ ಬದಿ ಕುಸಿತ ಆರಂಭಗೊಂಡರೆ ಹೆದ್ದಾರಿ ಸಂಚಾರ ಮೊಟಕುಗೊಳ್ಳುವ ಅಪಾಯವೂ ಇದೆ. ಪ್ರಸ್ತುತ ಚಾರ್ಮಾಡಿ ಹಳ್ಳಕ್ಕೆ ಹೊಸ ಸೇತುವೆ ಮಂಜೂರುಗೊಂಡಿದ್ದರೂ ಈ ವರೆಗೆ ನಿರ್ಮಾಣಗೊಂಡಿಲ್ಲ. 

ದುರಸ್ತಿಗೆ ಆಗ್ರಹ 
ಇಲಾಖೆ ಈ ಕುರಿತು ಎಚ್ಚೆತ್ತುಕೊಂಡು ಅಪಾಯ ಸಂಭವಿಸುವ ಮೊದಲು ತಡೆಗೋಡೆಯ ದುರಸ್ತಿಗೆ ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next