Advertisement

ದಲಿತರ ಬಾವಿಗೆ ಸೀಮೆಎಣ್ಣೆ  ಸುರಿದರು!

11:09 AM May 01, 2017 | Team Udayavani |

ಭೋಪಾಲ್‌: ಜಾತಿ ಪದ್ಧತಿ ಮನುಷ್ಯರನ್ನು ಯಾವ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂಬುದಕ್ಕೆ ಮಧ್ಯಪ್ರದೇಶದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಜಾತಿ ಮೇಲಾಟಕ್ಕಾಗಿ ದಲಿತರು ಉಪಯೋಗಿಸುತ್ತಿರುವ ಬಾವಿಗೆ ದುಷ್ಕರ್ಮಿಗಳು ಸೀಮೆಎಣ್ಣೆ  ಸುರಿದು, ನೀರು ಕುಡಿಯದಂತೆ ಮಾಡಿದ್ದಾರೆ.

Advertisement

ಈ ಘಟನೆ ಮಾಡ ಗ್ರಾಮದಲ್ಲಿ ನಡೆದಿದೆ. 500 ದಲಿತ ಕುಟುಂಬಗಳು ಇದೇ ಬಾವಿಯಿಂದ ಕುಡಿಯಲು ನೀರು ಬಳಸಿಕೊಳ್ಳುತ್ತಿದ್ದವು. ಆದರೆ ನೀರನ್ನು ಬಳಕೆ ಮಾಡಬಾರದು ಎಂಬ ದುರುದ್ದೇಶದಿಂದ ಸೀಮೆಎಣ್ಣೆ ಹಾಕಿ ವಿಷ ಬೆರೆಸಲಾಗಿದೆ. ಈ ಕುರಿತು ಮೇಲಧಿಕಾರಿಗಳಿಗೆ ದೂರು ನೀಡಲಾಗಿದ್ದು, ಅವರು ಬಂದು ಬಾವಿಯಲ್ಲಿನ ನೀರೆಲ್ಲ ಖಾಲಿ ಮಾಡಿ, ಹೊಸ ನೀರು ಬರುವಂತೆ ವ್ಯವಸ್ಥೆ ಮಾಡಿದ್ದಾರೆ.

ಇತ್ತೀಚೆಗೆ ಇಲ್ಲಿನ ದಲಿತ ಕುಟುಂಬವೊಂದು ಅದ್ದೂರಿಯಾಗಿ ಮದುವೆ ಸಮಾರಂಭವನ್ನು ಏರ್ಪಡಿಸಿತ್ತು. ವರನನ್ನು ಬೈಕ್‌ ಏರಿಸಿ, ಮೆರವಣಿಗೆ ಮಾಡಲಾಗಿತ್ತು. ಮೆರವಣಿಗೆ ಕೂಡ ಮುಖ್ಯರಸ್ತೆಯಲ್ಲೇ ಬಂದಿತ್ತು. ಇದರಿಂದ ಮೇಲ್ಜಾತಿಯವರು ಆಕ್ರೋಶಗೊಂಡಿದ್ದರು. ಅದಕ್ಕೆ ಪ್ರತೀಕಾರವಾಗಿ ಬಾವಿಗೆ ಸೀಮೆಎಣ್ಣೆ   ಸುರಿಯಲಾಗಿದೆ ಎಂದು ದಲಿತರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next