Advertisement

ಅಲ್ವಾರ್‌ : ಮದುವೆ ದಿಬ್ಬಣಕ್ಕೆ ಅಡ್ಡಿ , ದಲಿತ ಮದುಮಗನ ಮೇಲೆ ದಾಳಿ 

01:18 PM Dec 15, 2018 | |

ಅಲ್ವಾರ್‌: ಕಳವಳಕಾರಿ ಘಟನೆಯೊಂದರಲ್ಲಿ ದಿಬ್ಬಣ ಕೂಡಿಕೊಂಡು ಮೆರವಣಿಗೆಯಲ್ಲಿ ಸಾಗುತ್ತಿದ್ದ ದಲಿತ ಮದುಮಗನ ಮೇಲೆ ಮೇಲ್ವರ್ಗದ ಜನರು ದಾಳಿ ನಡೆಸಿದ ಘಟನೆ ನಡೆದಿದೆ.

Advertisement

ಮೇಲ್ವರ್ಗದ ಜನರ ಮನೆಗಳ ಬಳಿಯಿಂದ ಮೆರವಣಿಗೆ ತೆರಳಿದ್ದಕ್ಕಾಗಿ ಆಕ್ಷೇಪ ವ್ಯಕ್ತ ಪಡಿಸಿ ದಾಳಿ ನಡೆಸಲಾಗಿದೆ.

ದಾಳಿ ನಡೆದ ವಿಚಾರ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಕೊಂಡು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ರಾಜಸ್ಥಾನದಲ್ಲಿ  ನೂತನವಾಗಿ ಅಸ್ಥಿತ್ವಕ್ಕೆ ಬರುತ್ತಿರುವ ಕಾಂಗ್ರೆಸ್‌ ಸರಕಾರಕ್ಕೆ ಈ ರೀತಿಯ ಘಟನೆ ಸವಾಲಾಗಿ ಪರಿಣಮಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next