Advertisement

ದ.ಕ., ಉಡುಪಿ ಎರಡೂ ಕಡೆ ಆಹಾರ ಪ್ರ”ಭಾರ’

10:31 AM Jul 12, 2020 | sudhir |

ಉಡುಪಿ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ಸಿಬಂದಿ ಕೊರತೆ ಕೆಲಸ ಕಾರ್ಯಗಳಿಗೆ ತೊಡರು ಗಾಲು ಹಾಕಿದ್ದು, ಸಾರ್ವಜನಿಕರಿಗೆ ಸೇವೆ ಒದಗಿಸುವುದು ಸವಾಲಾಗಿದೆ. ಇದಕ್ಕೆಲ್ಲ ಕಿರೀಟ ಇರಿಸಿದಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಎರಡೂ ಜಿಲ್ಲೆಗಳಲ್ಲಿ ಇಲಾಖೆಯ ನೇತೃತ್ವ ವಹಿಸಬೇಕಿದ್ದ ಉಪ ನಿರ್ದೇ ಶಕ ಹುದ್ದೆಗಳೇ ಪ್ರಭಾರವಾಗಿವೆ.

Advertisement

ಒಟ್ಟಾರೆ ರಾಜ್ಯ ಮಟ್ಟದಲ್ಲೂ ಇಲಾಖೆಯಲ್ಲಿ ಇದೇ ಸ್ಥಿತಿಯಿದ್ದು, 1,569 ಹುದ್ದೆಗಳ ಪೈಕಿ 730 ಖಾಲಿ ಯಿವೆ. 15 ಕಡೆ ಉಪನಿರ್ದೇಶಕ ಹುದ್ದೆಗಳೇ ಖಾಲಿಯಿವೆ. ಅನರ್ಹ ಬಿಪಿಎಲ್‌ ಪಡಿತರ ಚೀಟಿ ಪತ್ತೆ ಸಹಿತ ಎಲ್ಲ ಕೆಲಸಗಳನ್ನು ಸೀಮಿತ ಸಿಬಂದಿ ನಡೆಸ ಬೇಕಿದ್ದು,ಒತ್ತಡಕ್ಕೆ ಸಿಲುಕಿದ್ದಾರೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಉಪ ನಿರ್ದೇಶಕ ಹುದ್ದೆಯಲ್ಲಿ ಪ್ರಭಾರ ನೆಲೆಯ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲಾ ಮತ್ತು ತಾಲೂಕು ಕಚೇರಿಗಳ ಕೆಲವು ಹುದ್ದೆಗಳಿಗೆ ಈ ಹಿಂದೆ ಹೊರಗುತ್ತಿಗೆಯಲ್ಲಿ ಸಿಬಂದಿ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ವರ್ಷದ ಹಿಂದೆ ಅದೂ ರದ್ದಾಗಿದೆ.

ಬಡವಾಯಿತು ಬಡವನ ಇಲಾಖೆ
ಸಮಾಜದ ಕಟ್ಟಕಡೆಯ ವ್ಯಕ್ತಿ ಜತೆ ನೇರ ಸಂಪರ್ಕ ಹೊಂದಿ ಬಡವನ ಹಸಿವು ನೀಗಿಸುವ ಇಲಾಖೆಯಿದು. ಇತರ ಇಲಾಖೆಗಳಿಗೆ ಆದಾಯ ಹರಿದು ಬಂದಂತೆ ಈ ಇಲಾಖೆಗೆ ಬರುವುದಿಲ್ಲ. ಪಡೆಯುವುದಕ್ಕಿಂತ ಹೆಚ್ಚು ಹಂಚುವುದೇ ಇದರ ಕಾರ್ಯಶೈಲಿ. ಇಲಾಖೆ ಆರ್ಥಿಕವಾಗಿ ಅಷ್ಟು ಸದೃಢವಾಗಿಲ್ಲ, ಸಿಬಂದಿ ಕೊರತೆಯೂ ಇದ್ದು, ಬಡವರ ಇಲಾಖೆ ಸ್ವತಃ ಬಡವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next