Advertisement

ಡಿ. ವೇದವ್ಯಾಸ್‌ ಕಾಮತ್‌ಗೆ ವೈಶ್ಯ ವಾಣಿ ಸಮಾಜದ ಸಂಪೂರ್ಣ ಬೆಂಬಲ

11:38 AM May 09, 2018 | |

ಮಹಾನಗರ: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ. ವೇದವ್ಯಾಸ್‌ ಕಾಮತ್‌ ಅವರು ಡೊಂಗರಕೇರಿ ಪ್ರದೇಶದಲ್ಲಿ ಮತ ಪ್ರಚಾರ ನಡೆಸಿದರು. ವೈಶ್ಯ ವಾಣಿ ಸಮಾಜದ ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಡಿ. ವೇದವ್ಯಾಸ್‌ ಕಾಮತ್‌ ದಂಪತಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಶ್ರೀ ದೇಗುಲದ ಹಾಗೂ ಸಮಾಜದ ವತಿಯಿಂದ ಡಿ. ವೇದವ್ಯಾಸ್‌ ಕಾಮತ್‌ ಅವರಿಗೆ ಪ್ರಸಾದ ನೀಡಿ ಆಶೀರ್ವದಿಸಲಾಯಿತು.

Advertisement

ಇದೇ ಸಂದರ್ಭದಲ್ಲಿ ದೇಗುಲದ ಮೊಕ್ತೇಸರ ವರದರಾಜ್‌ ನಾಗ್ವೇಕರ್‌, ಮನೋಜ್‌ ನಾಯಕ್‌, ಗೋಪಿಚಂದ್‌ ಶೇಟ್‌, ಯುವಕ ವೃಂದ ಅಧ್ಯಕ್ಷ ನಾಗರಾಜ್‌ ಶೇಟ್‌, ವೈಶ್ಯ ಎಜುಕೇಶನ್‌ ಸೊಸೈಟಿ ಅಧ್ಯಕ್ಷ ಶ್ರೀನಿವಾಸ್‌ ಶೇಟ್‌, ಮಹಿಳಾ ವೃಂದ ಅಧ್ಯಕ್ಷೆ ರೇಖಾ ತೊಲೆಧಾರ್‌ ಮತ್ತು ವೈಶ್ಯ ವಾಣಿ ಸಮಾಜದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next