Advertisement

ತುಮಕೂರಿನಲ್ಲಿ ಸಾವಿರಾರು ಕೋಟಿಯ ಬೇನಾಮಿ ಆಸ್ತಿ : ಶಿವಣ್ಣ ವಿರುದ್ಧ ಡಿಕೆಶಿ ಕಿಡಿ

05:51 PM Oct 15, 2021 | Team Udayavani |

ತುಮಕೂರು: ತುಮಕೂರಿನಲ್ಲಿ ಸಾವಿರಾರು ಕೋಟಿಯ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಆರೋಪಿಸಿದ್ದ ಬಿಜೆಪಿ ನಾಯಕ ಸೊಗಡು ಶಿವಣ್ಣ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಶುಕ್ರವಾರ ಕಿಡಿಕಾರಿದ್ದಾರೆ.

Advertisement

ಸದಾಶಿವ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್ ಅವರು , ಮೊದಲು ಅವನನ್ನು ಮೆಂಟಲ್ ಆಸ್ಪತ್ರೆಗೆ ದಾಖಲಿಸಬೇಕು. ರಾಜಕೀಯವಾಗಿ ಜಾಗ ಇಲ್ಲದೆ ಹುಡುಕುತ್ತಿದ್ದಾನೆ ಎಂದು ಕಿಡಿ ಕಾರಿದ್ದಾರೆ.

ಯಾವುದಾದರೂ ಆಸ್ತಿ ಇದ್ದರೆ ಅವನೇ ಮಾಡಿಕೊಳ್ಳಲಿ, ಅವನಿಗೆ ಎಲ್ಲಾ ಉಡುಗೊರೆಯಾಗಿ ಕೊಟ್ಟು ಬಿಡುತ್ತೇನೆ. .ರಾಜಕೀಯ ವಾಗಿ ಅವನಿಗೆ ಜಾಗ ಇಲ್ಲ ಹೀಗಾಗಿ ಮಾತನಾಡುತ್ತಿ ದ್ದಾನೆ. ಮೊದಲು ರಾಜಕೀಯ ಜಾಗ ಹುಡುಕಿಕೊಳ್ಳಲಿ ಎಂದು ಪ್ರತಿ ಸವಾಲು ಎಸೆದರು.

ಡಿ.ಕೆ.ಶಿವಕುಮಾರ್ ಅವರು ತುಮಕೂರಿನಲ್ಲಿ ಸಾವಿರಾರು ಕೋಟಿ ಮೊತ್ತದ ಬೇನಾಮಿ ಆಸ್ತಿ ಮಾಡಿಕೊಂಡಿದ್ದು, ಉಗ್ರಪ್ಪ ಹಾಗೂ ಸಲೀಂ ಮಾತನಾಡಿರುವುದು ಸತ್ಯ. ಡಿಕೆಶಿ ರಿಟೇಲ್ ವ್ಯಾಪಾರಿಯಲ್ಲ, ಹೋಲ್​​ಸೇಲ್ ವ್ಯಾಪಾರಿ. ಕೃಷ್ಣಮೂರ್ತಿಎನ್ನುವವರ ಹೆಸರಿನಲ್ಲಿ ಶಿವಕುಮಾರ್​ಗೆ ಬೇನಾಮಿ ಆಸ್ತಿ ಇದ್ದು. ಪಾವಗಡ ಸೋಲಾರ್ ಪಾರ್ಕ್, ಚಿಕ್ಕನಾಯಕನಹಳ್ಳಿ ಗಣಿಗಾರಿಕೆ ಮತ್ತು ತುಮಕೂರಿನಲ್ಲಿ 100 ಕೋಟಿ ರೂಪಾಯಿ ಮೌಲ್ಯದ ಹಂಚಿನ ಕಾರ್ಖಾನೆ ಇದೆ, ಎಸ್​.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬೇನಾಮಿ ಆಸ್ತಿ ಮಾಡಲಾಗಿತ್ತು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಗಂಭೀರ ಆರೋಪ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next