Advertisement

ದುರ್ಬಲಗೊಂಡ ಮ್ಯಾಂಡಸ್‌ : ತಮಿಳುನಾಡು,ಕರ್ನಾಟಕ ಆಂಧ್ರದಲ್ಲೂ ಮಳೆ

12:42 AM Dec 12, 2022 | Team Udayavani |

ಚೆನ್ನೈ/ಅಮರಾವತಿ: ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶದಲ್ಲಿ ಭಾರೀ ಆತಂಕ ಸೃಷ್ಟಿಸಿದ್ದ ಮ್ಯಾಂಡಸ್‌ ಚಂಡಮಾರುತ ದುರ್ಬಲವಾಗುತ್ತ ಸಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ರವಿವಾರ ತಿಳಿಸಿದೆ. ಇದರ ಹೊರತಾಗಿಯೂ ಮೂರು ರಾಜ್ಯಗಳ ಹಲವು ಪ್ರದೇಶಗಳಲ್ಲಿ ಮಳೆಯಾಗಿದೆ.

Advertisement

ತಮಿಳುನಾಡಿನಲ್ಲಿ 7 ದಿನಗಳ ಬಳಿಕ ಮೀನುಗಾರರಿಗೆ ವಿಶೇಷವಾಗಿ ಕಾರೈಕಲ್‌ನಲ್ಲಿ ಸಮುದ್ರಕ್ಕೆ ತೆರಳಲು ಅನುಮತಿ ನೀಡಲಾಗಿದೆ. ಚೆನ್ನೈಯಲ್ಲಿ ಸಮುದ್ರ ಕಿನಾರೆಯಲ್ಲಿ ಮೀನು ಮಾರಾಟ ಸಹಿತ ಸಂಬಂಧಿಸಿದ ಚಟುವಟಿಕೆಗಳು ಪುನರಾರಂಭಗೊಂಡಿವೆೆ. ಇದೇ ವೇಳೆ ಆಂಧ್ರಪ್ರದೇಶದಲ್ಲಿ ಚಂಡ ಮಾರುತದ ಪ್ರಭಾವದಿಂದಾಗಿ ಒಬ್ಬ ಅಸುನೀಗಿದ್ದಾನೆ. ವಿವಿಧ ನಿರಾಶ್ರಿತರ ಶಿಬಿರಗಳಲ್ಲಿ 1 ಸಾವಿರಕ್ಕೂ ಅಧಿಕ ಮಂದಿ ಆಶ್ರಯ ಪಡೆದಿದ್ದಾರೆ. 4,647.4 ಹೆಕ್ಟೇರ್‌ ಪ್ರದೇಶದಲ್ಲಿ ಇರುವ ಕೃಷಿ ಮತ್ತು 532.68 ಹೆಕ್ಟೇರ್‌ ಪ್ರದೇಶದಲ್ಲಿ ಇರುವ ತೋಟಗಾರಿಕ ಬೆಳೆ ನಷ್ಟವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next