Advertisement

ಹಿಜ್‌ಬುಲ್‌ ಕಮಾಂಡರ್‌ ಹತ್ಯೆಯ ಬಳಿಕ ಕಾಶ್ಮೀರ ಕಣಿವೆ ಉದ್ರಿಕ್ತ

12:14 PM May 29, 2017 | Team Udayavani |

ಶ್ರೀನಗರ : ಕಾಶ್ಮೀರ ಕಣಿವೆಯ ಹಲವು ಭಾಗಗಳಲ್ಲಿ ನಿರಂತರ ಎರಡನೇ ದಿನವಾದ ಇಂದು ಕೂಡ ಕರ್ಫ್ಯೂ ರೀತಿಯ ವಾತಾವರಣ ನೆಲೆಗೊಂಡಿದೆ. ಹಿಜ್‌ಬುಲ್‌ ಮುಜಾಹಿದೀನ್‌ ಕಮಾಂಡರ್‌ ಸಬ್‌ಝರ್‌ ಭಟ್‌ ಎನ್‌ಕೌಂಟರ್‌ನಲ್ಲಿ ಹತನಾಗಿರುವುದನ್ನು ಅನುಸರಿಸಿ ಕಾಶ್ಮೀರ ಕಣಿವೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಸೇನೆ ಕಟ್ಟೆಚ್ಚರ ವಹಿಸಿದೆ. 

Advertisement

ಖನ್ಯಾರ್‌, ನೌಹತ್ತಾ, ಸಫಾಕದಲ್‌, ಎಂ ಆರ್‌ ಗಂಜ್‌, ರೈನಾವಾರಿ, ಕ್ರಾಲ್‌ಖುಡ್‌ ಮತ್ತು ಮೈಸೂಮಾ ಎಂಬ ಏಳು ಪೊಲೀಸ್‌ ಠಾಣೆ ವ್ಯಾಪ್ತಿ ಪ್ರದೇಶದಲ್ಲಿ ನಿರ್ಬಂಧಗಳನ್ನು ವಿಧಿಸಲಾಗಿದೆ.

ಇದೇ ರೀತಿ ದಕ್ಷಿಣ ಕಾಶ್ಮೀರದ ಅನಂತನಾಗ್‌, ಶೋಪಿಯಾನ್‌ ಜಿಲ್ಲೆಗಳಲ್ಲಿ, ಬಾರಾಮೂಲಾ ಜಿಲ್ಲೆಯ ಸೋಪೋರ್‌ನಲ್ಲಿ ಕೂಡ ನಿರ್ಬಂಧಗಳನ್ನು ವಿಧಿಸಲಾಗಿದೆ. 

ಮಧ್ಯ ಕಾಶ್ಮೀರದ ಬಡಗಾಂವ್‌ ಮತ್ತು ಗಂದೇರ್‌ಬಾಲ್‌ನಲ್ಲಿ ಸೆ.144 ಹೇರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next