Advertisement

ಸಿಎಸ್‌ಆರ್‌ ನಿಧಿ ಪರಿಸರ ಸಂರಕ್ಷಣೆಗೆ ಮೀಸಲಿರಲಿ: ರಮಾನಾಥ ರೈ

06:00 AM Mar 25, 2018 | Team Udayavani |

ಪಣಂಬೂರು: ಎಲ್ಲ ಕಂಪೆನಿಗಳು ತಮ್ಮ ಸಿಎಸ್‌ಆರ್‌ ನಿಧಿಯ ಬಹುಪಾಲನ್ನು ಪರಿಸರ ಸಂರಕ್ಷಣೆಗಾಗಿ ಮೀಸಲಿಡಬೇಕು ಎಂದು ಸಚಿವ ಬಿ. ರಮಾನಾಥ ರೈ ಕರೆ ನೀಡಿದ್ದಾರೆ.

Advertisement

ನಗರದ ಹೊರವಲಯದ ಬೈಕಂಪಾಡಿಯಲ್ಲಿ ಶನಿವಾರ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಂಗಳೂರು ಪ್ರಾದೇಶಿಕ ಕಚೇರಿಯ ನೂತನ ಪರಿಸರ ಪ್ರಯೋಗಾಲಯ ಹಾಗೂ ಹಿರಿಯ ಪರಿಸರ ಅಧಿ ಕಾರಿ ಕಚೇರಿ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಬೆಂಗಳೂರು, ಹಾವೇರಿ ಸೇರಿದಂತೆ ರಾಜ್ಯದ 13 ಕಡೆಗಳಲ್ಲಿ ಪರಿಸರ ಇಲಾಖೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಸ್ವಂತ ಕಚೇರಿ ತೆರೆಯಲಾಗಿದೆ. ಮಂಗಳೂರಿನಲ್ಲೂ ಸ್ವಂತ ಕಟ್ಟಡ ತೆರೆಯಬೇಕೆಂಬ ಕನಸು ಈಗ ನನಸಾಗಿದೆ. ಇಲಾಖೆ ಇನ್ನಷ್ಟು ದಕ್ಷತೆ ಯಿಂದ ಕಾರ್ಯನಿರ್ವಹಿಸುವಂತಾಗ ಬೇಕು ಎಂದು ಅವರು ಸೂಚಿಸಿದರು.

ಸುರತ್ಕಲ್‌ ಸುತ್ತಮುತ್ತ ಕ್ಯಾನ್ಸರ್‌ ಪೀಡಿತರ ಸಂಖ್ಯೆ ಹೆಚ್ಚುತ್ತಿರು ವುದು ಕಳವಳಕಾರಿ. ಮಾಲಿನ್ಯ ಕಾರಕ ಕೈಗಾರಿಕೆಗಳು ಬೇಕಿಲ್ಲ. ಶಾಸಕನಾಗಿ ಜನರ ಆರೋಗ್ಯಕ್ಕೆ ಆದ್ಯತೆ ನನ್ನ ಮೊದಲ ಕರ್ತವ್ಯ. ಪರಿಸರ ಸಹ್ಯ ಕೈಗಾರಿಕೆಗಳು ಹೆಚ್ಚು ಬರಬೇಕು ಹಾಗೂ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಬೇಕು ಎಂದು ಶಾಸಕ ಬಾವಾ ಹೇಳಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಲಕ್ಷ್ಮಣ್‌ ಮಂಡಳಿ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಮೇಯರ್‌ ಭಾಸ್ಕರ ಕೆ., ಕಾರ್ಪೊರೇಟರ್‌ಗಳಾದ ಪುರುಷೋತ್ತಮ ಚಿತ್ರಾಪುರ, ಪ್ರತಿಭಾ ಕುಳಾç, ತಾ.ಪಂ. ಸದಸ್ಯೆ ಅಪ್ಸತಾ, ಪ್ರಯೋಗಾಲಯದ ಮುಖ್ಯ ವೈಜ್ಞಾನಿಕ ಅಧಿ ಕಾರಿ ಬಿ.ಆರ್‌. ಬಾಲ ಗಂಗಾಧರನ್‌, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್‌. ಖಾದರ್‌ ಉಪಸ್ಥಿತರಿದ್ದರು. ರಾಜಶೇಖರ ಪುರಾಣಿಕ್‌ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next