Advertisement

Manipur; ಭದ್ರತಾ ಪಡೆಗಳ ಮೇಲೆ ದುಷ್ಕರ್ಮಿಗಳ ಹೊಂಚುದಾಳಿ: ಯೋಧ ಹುತಾತ್ಮ

06:32 PM Jul 14, 2024 | Team Udayavani |

ಇಂಫಾಲ: ಮಣಿಪುರದ ಜಿರಿಬಾಮ್‌ನಲ್ಲಿ ಸಿಆರ್‌ಪಿಎಫ್ ಮತ್ತು ರಾಜ್ಯ ಪೊಲೀಸರ ಸಂಯೋಜಿತ ತಂಡದ ಮೇಲೆ ಭಾನುವಾರ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಹೊಂಚುದಾಳಿ ನಡೆಸಿದ್ದು ಓರ್ವ CRPF ಯೋಧ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.

Advertisement

ಅಪರಿಚಿತ ಶಸ್ತ್ರಸಜ್ಜಿತ ವ್ಯಕ್ತಿಗಳು 20 ನೇ ಬೆಟಾಲಿಯನ್ ಸಿಆರ್‌ಪಿಎಫ್ ಮತ್ತು ಮಣಿಪುರ ಪೊಲೀಸರ ತಂಡವನ್ನು ಬೆಳಗ್ಗೆ 9.40 ರ ಸುಮಾರಿಗೆ ಗುರಿಯಾಗಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೇ 2023 ರಲ್ಲಿ ಆರಂಭವಾದ (Manipur) ಜನಾಂಗೀಯ ಹಿಂಸಾಚಾರದ ನಡುವೆ ಭದ್ರತಾ ಪರಿಸ್ಥಿತಿಯು ಕಠೋರವಾಗಿಯೇ ಇದೆ ಎನ್ನುವುದಕ್ಕೆ ಈ ದಾಳಿ ಸಾಕ್ಷಿಯಾಗಿದೆ.

ಶನಿವಾರ ಸಂಭವಿಸಿದ ಗುಂಡಿನ ದಾಳಿ ಘಟನೆಗೆ ಸಂಬಂಧಿಸಿದಂತೆ ಶೋಧ ಕಾರ್ಯಾಚರಣೆ ನಡೆಸಲು ಸಂಯೋಜಿತ ಭದ್ರತಾ ತಂಡ ಮೊನ್‌ಬಂಗ್ ಗ್ರಾಮವನ್ನು ಸಮೀಪಿಸುತ್ತಿದ್ದಾಗ ಈ ಘಟನೆ ನಡೆದಿದೆ.

ಹತ್ಯೆಯಾದ ಸಿಆರ್‌ಪಿಎಫ್ ಯೋಧ ಬಿಹಾರ ಮೂಲದ ಅಜಯ್ ಕುಮಾರ್ ಝಾ( 43) ಎಂದು ಗುರುತಿಸಲಾಗಿದೆ. ಗಾಯಗೊಂಡ ಮೂವರು ಸಿಬಂದಿಗಳಲ್ಲಿ ಜಿರಿಬಾಮ್ ಪೊಲೀಸ್ ಠಾಣೆಯ ಸಬ್-ಇನ್ಸ್‌ಪೆಕ್ಟರ್ (ಎಸ್‌ಐ) ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿರಿಬಾಮ್ ಪ್ರದೇಶವು ಇತ್ತೀಚೆಗೆ ಹಲವಾರು ಹಿಂಸಾಚಾರದ ಘಟನೆಗಳಿಗೆ ಸಾಕ್ಷಿಯಾಗಿದೆ. ಜೂನ್‌ನಲ್ಲಿ, ಕುಕಿ ಮತ್ತುಮೈತೆಯ್ ಸಮುದಾಯಗಳ ನಡುವಿನ ಘರ್ಷಣೆ ಮುಂದುವರೆದಂತೆ ಕನಿಷ್ಠ 70 ಮನೆಗಳು ಮತ್ತು ಪೊಲೀಸ್ ಔಟ್‌ಪೋಸ್ಟ್‌ಗಳಿಗೆ ಬೆಂಕಿ ಹಚ್ಚಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next