Advertisement

Ukraine ಗಿಂತ ಮೊದಲು ಮಣಿಪುರಕ್ಕೆ ಭೇಟಿ ನೀಡಿ: ಮೋದಿಗೆ ಜೈರಾಂ ಆಗ್ರಹ

12:58 AM Jul 29, 2024 | Team Udayavani |

ಹೊಸದಿಲ್ಲಿ: ಪ್ರಧಾನಿ ಮೋದಿ ಮುಂದಿನ ತಿಂಗಳು ಯುದ್ಧಪೀಡಿದ ಉಕ್ರೇನ್‌ಗೆ ಭೇಟಿ ನೀಡಲಿ ದ್ದಾರೆ ಎಂಬ ವರದಿ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ಮೊದಲು ಮಣಿ ಪುರ ಬಳಿಕ ಉಕ್ರೇನ್‌ ಎಂದಿದೆ. ಮಣಿಪು ರ ದಲ್ಲಿ ಉಂಟಾದ ಗಲಭೆ, ನಂತರದ ಪರಿಸ್ಥಿತಿ ಬಗ್ಗೆ ನೀತಿ ಆಯೋಗದ ಸಭೆಯ ಬಳಿಕ ಮಣಿಪುರ ಮುಖ್ಯಮಂತ್ರಿ ಎನ್‌.ಬೀರೇನ್‌ ಸಿಂಗ್‌ ಜತೆಗೆ ಮೋದಿ ಚರ್ಚೆ ನಡೆಸಿದ್ದಾರೆಯೇ? ಪ್ರಧಾನಿಯನ್ನು ಬಿರೇನ್‌ ಸಿಂಗ್‌ ಮಣಿಪುರಕ್ಕೆ ಆಹ್ವಾ ನಿಸಿದ್ದಾರೆಯೇ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯ ದರ್ಶಿ ಜೈ ರಾಮ್‌ ರಮೇಶ್‌ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ. ಈ ಇಬ್ಬರು ಚರ್ಚೆ ನಡೆಸಲಿ ಎಂದು ಜನರು ಬಯಸುತ್ತಿದ್ದಾರೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next