Advertisement

ಮೊಸಳೆ ಪ್ರತ್ಯಕ್ಷ:ಸಾರ್ವಜನಿಕರಲ್ಲಿ ಆತಂಕ

04:07 PM Nov 30, 2018 | |

ಕುರುಗೋಡು: ಸಮೀಪದ ಎಮ್ಮಿಗನೂರು ಗ್ರಾಮದ ಜಡಿತಾತನ ದೇವಸ್ಥಾನದ ಬಳಿಯಿರುವ ಹಳ್ಳದಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು ಸಾರ್ವಜನಿಕರಲ್ಲಿ ಆತಂಕದ  ವಾತಾವಾರಣ ಸೃಷ್ಟಿಸಿದೆ. ಕಳೆದ ತಿಂಗಳು ಅದೇ ಹಳ್ಳದಲ್ಲಿ ಮೊಸಳೆ ಪ್ರತ್ಯಕ್ಷವಾಗಿತ್ತು. ಇದರಿಂದ ಆತಂಕಗೊಂಡಿದ್ದ ರೈತರು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೆ ಕ್ರಮ ಕೈಗೊಳ್ಳಲು ಮುಂದಾಗಿಲ್ಲ ಎಂದು ಸಾರ್ವಜ ನಿಕರು ಆರೋಪಿಸಿದ್ದಾರೆ. ಅದೇ ಹಳ್ಳದಲ್ಲಿ ಮತ್ತೆ ಮೊಸಳೆ ಪ್ರತ್ಯಕ್ಷಗಾಗಿರುವುದರಿಂದ ಹಳ್ಳದ ಪಕ್ಕದಲ್ಲಿರುವ ಜಮೀನುಗಳಿಗೆ ರೈತರು ಓಡಾಡಲು ಭಯ ಪಡುವಂತಾಗಿದೆ. ಅಲ್ಲದೇ ಈಗ ಭತ್ತ ಕಟಾವಿಗೆ ಬಂದಿದ್ದು, ಹಗಲು ರಾತ್ರಿ ವೇಳೆ ಗದ್ದೆ ಮತ್ತು ಮನೆಗೆ ಹಳ್ಳದ ಪಕ್ಕದಲ್ಲೆ ಓಡಾಡುತ್ತಿದ್ದು ಮೊಸಳೆ ಪ್ರತ್ಯಕ್ಷವಾಗಿರುವುದರಿಂದ ರೈತರಲ್ಲಿ ಜೀವ ಭಯ ಕಾಡುತ್ತಿದೆ. ಅಲ್ಲದೇ ಹಳ್ಳದಲ್ಲಿ ಬಟ್ಟೆ ತೊಳೆಯಲು ಹೊಗುವ ಮಹಿಳೆಯರು ಕೂಡ ಹಳ್ಳದ ಕಡೆಗೆ ಹೋಗದಂತಾಗಿದೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಮೊಸಳೆ ಸೆರೆ ಹಿಡಿದು ಸುರಕ್ಷಿತ ಪ್ರದೇಶಕ್ಕೆ ಬಿಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next