Advertisement

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

02:43 PM Oct 14, 2024 | Team Udayavani |

ಆನೇಕಲ್‌: ಕುಡಿದ ಮತ್ತಿನಲ್ಲಿ ತಂದೆಯನ್ನೇ ಕೊಂದಿ ರುವ ಘಟನೆ ಆನೇಕಲ್‌ ತಾಲೂಕಿನ ಬನ್ನೇರುಘಟ್ಟದಲ್ಲಿ ನಡೆದಿದೆ. ವೇಲಾಯುಧನ್‌ (75) ಮಗನಿಂದಲೇ  ಹತ್ಯೆಯಾದವರು. ಚಡ್ಡಿ ಬದಲು ಪಂಚೆ ಧರಿಸು ಎಂದಿದ್ದಕ್ಕೆ ತಾಯಿ ಹಾಗೂ ಸಹೋದರನ ಕಣ್ಣಮುಂದೆಯೇ ತಂದೆಯನ್ನು ಕೊಂದಿದ್ದಾನೆ

Advertisement

ಆರೋಪಿ ವಿನೋದ್‌ ಕುಮಾರ್‌ ಮದ್ಯವ್ಯಸನಿಯಾ ಗಿದ್ದು, ಶನಿವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ತಾಯಿ ಮತ್ತು ಸಹೋದರನ ಕಣ್ಣ ಮುಂದೆ ಚಾಕುವಿನಿಂದ ತಂದೆಯ ಕತ್ತು ಸೀಳಿ ಕೊಂದು ಪೊಲೀಸರಿಗೆ ಶರಣಾಗಿದ್ದಾನೆ.

ಬೆಂಗಳೂರಿನ ಬನ್ನೇರುಘಟ್ಟದಲ್ಲಿ ಕುಟುಂಬದೊಂದಿಗೆ ನೆಲೆಸಿದ್ದು, ರಾತ್ರಿ ಕ್ಷುಲ್ಲಕ ಕಾರಣಕ್ಕೆ ಮಗ ವಿನೋದ್‌ ಕುಮಾರ್‌ ಚಾಕುವಿನಿಂದ ಇರಿದು ಕೊಂದಿದ್ದಾನೆ. ಸಹೋದರ ವಿಫುಲ್‌ ಕುಮಾರ್‌ಗೆ 300 ರೂ. ನೀಡಿ ಮದ್ಯ ತರಿಸಿದ್ದ ವಿನೋದ್‌ ಎಂದಿನಂತೆ ತಂದೆಗೆ ಒತ್ತಾಯ ಪೂರ್ವಕವಾಗಿ ಮದ್ಯ ಕುಡಿಸಿದ್ದಾನೆ. ಈ ವೇಳೆ ಚಡ್ಡಿ ಧರಿಸಿ ಓಡಾಡುತ್ತಿರುವುದನ್ನು ಕಂಡು ಪಂಚೆ ಧರಿಸುವಂತೆ ಹೇಳಿದ್ದಕ್ಕೆ ಕೋಪಗೊಂಡ ಮಗ ವಿನೋದ್‌ ಮೊದಲು ತಂದೆ ತಲೆಯನ್ನು ಗೋಡೆಗೆ ಗುದ್ದಿ ಕೆಳಗೆ ಬೀಳಿಸಿದ್ದಾನೆ. ಬಳಿಕ ಕಾಲಿನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿ, ನಂತರ‌ ಚಾಕುವಿನಿಂದ ಕತ್ತು ಸೀಳಿ ಕೊಂದಿದ್ದಾನೆ.

ತಾಯಿ ಕ್ಯಾನ್ಸರ್‌ ರೋಗಿ: ಆರೋಪಿ ವಿನೋದ್‌ ಕುಮಾರ್‌ ಕುಡಿತದ ಚಟಕ್ಕೆ ದಾಸನಾಗಿದ್ದು, ಸೈಕೋ ರೀತಿಯಲ್ಲಿ ವರ್ತನೆ ಮಾಡುತ್ತಿದ್ದನು. ಈ ಹಿಂದೆಯೂ ತಂದೆ ವೇಲಾಯುಧನ್‌ ಮತ್ತು ಸಹೋದರ ವಿಫುಲ್‌ ಕುಮಾರ್‌ ಮೇಲೆ ಹಲ್ಲೆ ನಡೆಸಿದ್ದನು. ಕೆಲಸಕ್ಕೆ ಹೋಗದೆ ಸದಾ ಮನೆಯಲ್ಲಿಯೇ ಇರುತ್ತಿದ್ದ ವಿನೋದ್‌, ತಂದೆಯ ಪಿಂಚಣಿ ಹಣವನ್ನು ಬೆದರಿಸಿ ಕಸಿಯುತ್ತಿದ್ದನು. ತಾಯಿ ಕ್ಯಾನ್ಸರ್‌ ರೋಗಿ, ತಮ್ಮ ಮಾನಸಿಕವಾಗಿ ದುರ್ಬಲನಾಗಿದ್ದು, ತಂದೆಯ ಪಿಂಚಣಿ ಹಣದಿಂದ ಹೇಗೋ ಸಂಸಾರ ಸಾಗುತ್ತಿತ್ತು. ಆದರೆ, ಈಗ ಮನೆಗೆ ಆಧಾರವಾಗಿದ್ದ ತಂದೆಯೂ ಸಾವನ್ನಪ್ಪಿದ್ದು, ಕುಟುಂಬ ಇಕ್ಕಟ್ಟಿಗೆ ಸಿಲುಕಿದೆ. ಘಟನೆ  ಸಂಬಂಧ ಬನ್ನೇರುಘಟ್ಟ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next