Advertisement

ಪತಿ, ಪತ್ನಿ ನಡುವೆ ಜಗಳ; ನೊಂದ ಪತ್ನಿ ನೇಣಿಗೆ ಶರಣು

05:58 PM May 04, 2022 | Team Udayavani |

ಕಾರ್ಕಳ: ದಂಪತಿಯ ಜಗಳ ಪತ್ನಿ ಆತ್ಮಹತ್ಯೆಗೆ ಶರಣಾಗುವ ಮೂಲಕ ಅಂತ್ಯಗೊಂಡ ಘಟನೆ ಮೇ 3 ರಂದು ಕುಕ್ಕುಂದೂರು ಗ್ರಾಮದ ಜೋಡುರಸ್ತೆಯಲ್ಲಿ ಸಂಭವಿಸಿದೆ.

Advertisement

ಮೃತರನ್ನು ಶೋಭಾ (28) ಎಂದು ಗುರುತಿಸಲಾಗಿದೆ. ಶೋಭಾ ಅವರಿಗೆ ಶಿವಮೊಗ್ಗದ ಲೋಕೇಶ ಅವರ ಜತೆ ವಿವಾಹವಾಗಿತ್ತು. ಅವರು ಜೋಡುರಸ್ತೆ ಬಳಿ ಮನೆ ಮಾಡಿ ವಾಸವಿದ್ದರು. ಮೇ 3ರಂದು ದಂಪತಿ ನಡುವೆ ಜಗಳವಾಗಿದ್ದು, ಅದರಿಂದ ನೊಂದು ಶೋಭಾ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾರೆ.

ವಿಚಾರ ತಿಳಿದ ಪತಿ ಲೋಕೇಶ ಶೋಭಾ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವಿಚಾರವನ್ನು ಪಕ್ಕದ ಮನೆಯವರು ಮೃತರ ಸಹೋದರ ಮಂಜುನಾಥರಿಗೆ ತಿಳಿಸಿದ್ದು, ಅದರಂತೆ ಅವರು ಆಸ್ಪತ್ರೆಗೆ ತೆರಳಿದ ವೇಳೆ ಶೋಭಾ ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಪತ್ನಿ ಜತೆ ಕುಡಿದು ಜಗಳವಾಡಿದ್ದನ್ನು ಲೋಕೇಶ ಒಪ್ಪಿಕೊಂಡಿದ್ದಾನೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next