Advertisement

ಚೆನ್ನೈ: ಮಗಳ ಹತ್ಯೆ ಸುದ್ದಿ ಕೇಳಿ ಅಪ್ಪ ಆತ್ಮಹತ್ಯೆ!

06:30 PM Oct 14, 2022 | Team Udayavani |

ಚೆನ್ನೈ: ದುಷ್ಕರ್ಮಿಯೊಬ್ಬ ಚೆನ್ನೈನಲ್ಲಿ ಕಾಲೇಜು ವಿದ್ಯಾರ್ಥಿನಿಯನ್ನು ಚಲಿಸುತ್ತಿರುವ ರೈಲಿನ ಮುಂಭಾಗಕ್ಕೆ ದೂಡಿ ಆಕೆಯನ್ನು ಹತ್ಯೆಗೈದ ಬೆನ್ನಲ್ಲೇ, ಆಘಾತ ತಾಳಲಾರದೇ ಆಕೆಯ ತಂದೆ ಆತ್ಮಹತ್ಯೆಗೆ ಶರಣಾದ ಮನಕಲಕುವ ಘಟನೆ ಚೆನ್ನೈನಲ್ಲಿ ನಡೆದಿದೆ.

Advertisement

ಖಾಸಗಿ ಕಾಲೇಜಿನಲ್ಲಿ ಬಿಎಸ್‌ಸಿ ಓದುತ್ತಿದ್ದ ಸತ್ಯಪ್ರಿಯಾಳನ್ನು ಸತೀಶ್‌ ಎಂಬಾತ ಕಳೆದ 1 ವರ್ಷದಿಂದ ಚುಡಾಯಿಸುತ್ತಿದ್ದ. ಈ ಕುರಿತು 2 ಬಾರಿ ಸತ್ಯಪ್ರಿಯಾಳ ತಾಯಿ ಪೊಲೀಸರಿಗೆ ದೂರು ನೀಡಿ, ನಂತರ ಸಂಧಾನ ಏರ್ಪಟ್ಟಿತ್ತು. ಗುರುವಾರ ರೈಲು ಹಳಿಯ ಸಮೀಪದಲ್ಲೇ ಸತ್ಯಪ್ರಿಯಾಳೊಂದಿಗೆ ಸತೀಶ್‌ ವಾಗ್ವಾದಕ್ಕಿಳಿದಿದ್ದ. ಒಂದು ಹಂತದಲ್ಲಿ, ರೈಲು ವೇಗವಾಗಿ ಆಗಮಿಸುತ್ತಿರುವಾಗಲೇ ಆತ ಆಕೆಯನ್ನು ಹಳಿಗೆ ನೂಕಿದ್ದ. ಸತ್ಯಪ್ರಿಯಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಳು.

ಈ ವಿಷಯ ತಿಳಿದು ಆಘಾತಗೊಂಡ ಆಕೆಯ ತಂದೆ, ಶುಕ್ರವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸತೀಶ್‌ ನಿವೃತ್ತ ಸ್ಪೆಷಲ್‌ ಸಬ್‌ಇನ್‌ಸ್ಪೆಕ್ಟರ್‌ನ ಪುತ್ರನಾಗಿದ್ದು, ಅದೇ ಠಾಣೆಯಲ್ಲಿ ಸತ್ಯಪ್ರಿಯಾಳ ತಾಯಿ ಹೆಡ್‌ಕಾನ್‌ಸ್ಟೆಬಲ್‌ ಆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next